<p><strong>ಕುದೂರು: </strong>ಸೂರಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾಯಾದಿಗಳ ಕಲಹಕ್ಕೆ ಸುಮಾರು 17 ವರ್ಷಗಳ ಹಿಂದೆ ಬೆಳೆಯಲಾಗಿದ್ದ 30 ಮಾವಿನ ಮರಗಳು ಬಲಿಯಾಗಿವೆ.</p>.<p>ಸೂರಪ್ಪನಹಳ್ಳಿ ಗ್ರಾಮದ ಎರಡು ಎಕರೆ ಜಮೀನನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡು ಅಣ್ಣ, ತಮ್ಮಂದಿರು ತಲಾ ಒಂದೊಂದು ಎಕರೆ ತೆಗೆದುಕೊಂಡಿದ್ದಾರೆ.</p>.<p>‘ಶುಕ್ರವಾರ ಬೆಳಗ್ಗೆ ನಮ್ಮ ಜಮೀನಿಗೆ ನುಗ್ಗಿ ಸುಮಾರು 17 ವರ್ಷದ 30 ಮಾವಿನ ಮರಗಳನ್ನು ಯಂತ್ರದ ಮೂಲಕ ಬುಡ ಸಮೇತ ಕಿತ್ತು ಹಾಕಲಾಗಿದೆ’ ಎಂದು ರೇಣುಕಮ್ಮ ಎಂಬ ಮಹಿಳೆ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ದಾಯಾದಿಗಳಾದ ನಂಜೇಗೌಡ, ರಂಗಮ್ಮ, ಚಾಮರಾಜಮ್ಮ, ನಾಗಮ್ಮ, ರಾಮಚಂದ್ರ ಎಂಬುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು: </strong>ಸೂರಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾಯಾದಿಗಳ ಕಲಹಕ್ಕೆ ಸುಮಾರು 17 ವರ್ಷಗಳ ಹಿಂದೆ ಬೆಳೆಯಲಾಗಿದ್ದ 30 ಮಾವಿನ ಮರಗಳು ಬಲಿಯಾಗಿವೆ.</p>.<p>ಸೂರಪ್ಪನಹಳ್ಳಿ ಗ್ರಾಮದ ಎರಡು ಎಕರೆ ಜಮೀನನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡು ಅಣ್ಣ, ತಮ್ಮಂದಿರು ತಲಾ ಒಂದೊಂದು ಎಕರೆ ತೆಗೆದುಕೊಂಡಿದ್ದಾರೆ.</p>.<p>‘ಶುಕ್ರವಾರ ಬೆಳಗ್ಗೆ ನಮ್ಮ ಜಮೀನಿಗೆ ನುಗ್ಗಿ ಸುಮಾರು 17 ವರ್ಷದ 30 ಮಾವಿನ ಮರಗಳನ್ನು ಯಂತ್ರದ ಮೂಲಕ ಬುಡ ಸಮೇತ ಕಿತ್ತು ಹಾಕಲಾಗಿದೆ’ ಎಂದು ರೇಣುಕಮ್ಮ ಎಂಬ ಮಹಿಳೆ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ದಾಯಾದಿಗಳಾದ ನಂಜೇಗೌಡ, ರಂಗಮ್ಮ, ಚಾಮರಾಜಮ್ಮ, ನಾಗಮ್ಮ, ರಾಮಚಂದ್ರ ಎಂಬುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>