ರಾಮನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರವು ಐದನೇ ದಿನವಾದ ಭಾನುವಾರವೂ ಮುಂದುವರಿಯಿತು. ಈ ದಿನ ರಾಮನಗರ ವಿಭಾಗದಲ್ಲಿ 47 ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದವು.
ವಾರಾಂತ್ಯದ ದಿನವಾದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎನ್ನುವುದು ಖಾಸಗಿ ವಾಹನಗಳ ಸಿಬ್ಬಂದಿಯ ನಿರೀಕ್ಷೆ ಆಗಿತ್ತು. ಆದರೆ ಬೆಳಗ್ಗೆ ಹಾಗೂ ಸಂಜೆ ಒಂದಿಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದು ಬಿಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣಗಳತ್ತ ಹೆಜ್ಜೆ ಇಡಲಿಲ್ಲ. ಭಾನುವಾರ ಖಾಸಗಿ ಬಸ್ಗಳ ಸಂಚಾರ ಹೆಚ್ಚಿತ್ತು.
ಕನಕಪುರ ಡಿಪೊದಿಂದ 11, ಆನೇಕಲ್ನಿಂದ 9, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿಯಿಂದ ತಲಾ 6, ರಾಮನಗರದಿಂದ 9 ಕೆಎಸ್ಆರ್ಟಿಸಿ ಬಸ್ಗಳು ಜಿಲ್ಲೆಯ ವಿವಿಧ ಭಾಗಗಳಿಗೆ ಭಾನುವಾರ ಸಂಚರಿಸಿದವು. ಸೋಮವಾರ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದರು.