ಹಳೆಯ ಭೂ ದಾಖಲೆಗಳಿಗೆ ಆಧುನಿಕ ಸ್ಪರ್ಶ ಯೋಜನೆಯಡಿ 23,469 ಡಿಜಿಟಲ್ ಪಹಣಿ ಸೃಜನೆ 35 ಗ್ರಾಮಗಳಲ್ಲಿ ಸತತ 4 ತಿಂಗಳು ಭೂಮಾಪನ
ಡಿಜಿಟಲ್ ಪಹಣಿ ಇಂದು ವಿತರಣೆ
ಕನಕಪುರ ತಾಲ್ಲೂಕಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಗ್ರಾಮ ದೊಡ್ಡಆಲಹಳ್ಳಿ ಭಾನುವಾರ (ಜ. 12) ಜಮೀನು ಮಾಲೀಕರಿಗೆ ಯೋಜ ಅಡಿ ಸೃಜಿಸಿರುವ ಪಹಣಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ‘ರಾಜ್ಯದಾದ್ಯಂತ ವಿಸ್ತರಣೆ’ ‘ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ ದೋಷ ಸರಿಪಡಿಸಿ ಜಮೀನಿನ ನಿಖರ ಮಾಹಿತಿ ಒಳಗೊಂಡ ನಕ್ಷೆ ಸಹಿತ ಪಹಣಿ ವಿತರಿಸಲು ತಂತ್ರಜ್ಞಾನ ಆಧಾರಿತ ಮರು ಭೂಮಾಪನ ಯೋಜನೆಯನ್ನು ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ನನ್ನ ಕ್ಷೇತ್ರದ ಉಯ್ಯಂಬಳ್ಳಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು ಮುಂದೆ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ತಕರಾರಿಗೆ 30 ದಿನ ಅವಕಾಶ ಜಮೀನು ಮಾಲೀಕರಿಗೆ ವಿತರಿಸುವ ಡಿಜಿಟಲ್ ಪಹಣಿಯಲ್ಲಿ ನಮೂದಿಸಿರುವ ಜಮೀನಿನ ಅಳತೆ ನಕ್ಷೆ ಮಾಲೀಕತ್ವದ ವಿವರ ಸೇರಿದಂತೆ ಇತರ ಯಾವುದೇ ನಮೂದಿತ ವಿವರದ ಕುರಿತು ಮಾಲೀಕರು 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಅದಕ್ಕಾಗಿ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯು ಗ್ರಾಮ ಪಂಚಾಯಿತಿಗಳಲ್ಲಿ ತಕರಾರು ಸ್ವೀಕರಣ ಕೇಂದ್ರ ತೆರೆಯಲಾಗುವುದು ಎಂದು ಬಿ.ಆರ್. ಹನುಮೇಗೌಡ ತಿಳಿಸಿದರು.
ಅನುಕೂಲಗಳೇನು?
ಹಳೆ ಭೂ ದಾಖಲೆಗಳಲ್ಲಿನ ತಾಂತ್ರಿಕ ದೋಷ ಜಮೀನಿನ ಗಡಿ ವಿವಾದ ತಿದ್ದುಪಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮುಕ್ತಿ. ಡ್ರೋನ್ ಚಿತ್ರ ಸಹಿತ ನಕ್ಷೆ ಮತ್ತು ಅಳತೆಯ ಮಾಹಿತಿ ನಿಖರ ಮಾಹಿತಿ ಸಿಗಲಿದೆ. ಆರ್.ಟಿ.ಸಿ ತಿದ್ದುಪಡಿ ಆಕಾರಬಂದ್ ದಾಖಲೆಗಳ ಪುನರ್ಸೃಷ್ಟಿ ಸ್ಕೇಲ್ ಸಂಖ್ಯೆ ಟಿಪ್ಪಣಿ ತಯಾರಿಸುವುದು ಹಿಸ್ಸಾ ದಾಖಲೆಗಳ ರದ್ಧತೆ ಹಾಗೂ ಸರ್ವೇ ದಾಖಲೆಗಳ ತಿದ್ದುಪಡಿಗೆ ಮುಕ್ತಿ. ಜನವಸತಿ ಪ್ರದೇಶದ ಆಸ್ತಿಗಳನ್ನು ಸ್ವಾಮಿತ್ವ ಯೋಜನೆಯಡಿ ಅಳತೆ ಮಾಡಿ ಕರಡು ಆಸ್ತಿಪತ್ರಗಳನ್ನು ಹಕ್ಕುದಾರರಿಗೆ ವಿತರಿಸಿ ಸದರಿ ದಾಖಲೆಗಳನ್ನು ಮರು ಭೂಮಾಪನ ದಾಖಲೆಯೊಂದಿಗೆ ಸಂಯೋಜಿಸಲಾಗಿದೆ. ನಿಖರ ಭೂ ದಾಖೆಗಳಿಂದ ಕೃಷಿ ನೀತಿಗಳ ಅನುಷ್ಠಾನ ಸಬ್ಸಿಡಿ ಹಂಚಿಕೆ ನಿರ್ದಿಷ್ಟ ಬೆಳೆಗಳ ಭೂಮಿ ಗುರುತಿಸಲು ಸಹಕಾರಿ. ವಸತಿ ವಾಣಿಜ್ಯ ಕೈಗಾರಿಕೆ ಹಾಗೂ ಕೃಷಿ ಉದ್ದೇಶಕ್ಕೆ ಭೂ ಪ್ರದೇಶ ಗುರುತಿಸುವುದು ಸರಳವಾಗಲಿದೆ. ಬಹು ಮಾಲೀಕತ್ವದ ಪಹಣಿಗಳನ್ನು ಅಳತೆ ಮಾಡಿ ಏಕ ಮಾಲೀಕತ್ವದ ಪಹಣಿ ಸೃಜನೆ. ಸರ್ಕಾರದಿಂದ ಮಂಜೂರಾದ ಜಮೀನಿಗೆ ಪೋಡಿ ಭಾಗ್ಯ. ಜಮೀನು ದಾಖಲೆ ಮತ್ತು ಹಕ್ಕು ದಾಖಲೆಯ ನಿಖರ ಮಾಹಿತಿ ಲಭ್ಯ. ಜಂಟಿ ಖಾತೆ ಪಹಣಿಗಳನ್ನು ಪೋಡಿ ಮಾಡಿ ಪ್ರತ್ಯೇಕಗೊಳಿಸಲಾಗಿದೆ. ಹಕ್ಕುದಾರರು ಮರಣ ಹೊಂದಿದ್ದರೆ ವಾರಸುದಾರರ ಹೆಸರಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ವಿತರಣೆ.