ಮಾಗಡಿ: ಪಟ್ಟಣದಿಂದ ಉತ್ತರ ಭಾರತದ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದ ಹೊಸಪೇಟೆ ನಿವಾಸಿ ಎಚ್.ಆರ್.ಬ್ಯಾಟಪ್ಪ (62) ಕೇದಾರನಾಥದಲ್ಲಿ ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಮೂವರು ಪುತ್ರಿಯರು, ಪತ್ನಿ ಇದ್ದಾರೆ.
ಶನಿವಾರ ರಾತ್ರಿ ಕೇದಾರನಾಥ ದೇವಾಲಯದ ಬಳಿ ವಸತಿಗೃಹದಲ್ಲಿ ಇದ್ದಾಗ ಎದೆನೋವು ಕಾಣಿಸಿಕೊಂಡಿದ್ದು ಮುಂಜಾನೆ 4:30ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಜತೆಯಲ್ಲಿದ್ದ ಯಾತ್ರಿ ಸಿದ್ದೇಗೌಡ, ನರಸಿಂಹ ಶೆಟ್ಟಿ ದೂರವಾಣಿ ಮೂಲಕ ‘ಪ್ರಜಾವಾಣಿ’ ತಿಳಿಸಿದರು.
ಜೂನ್ 26ರಂದು ಮಾಗಡಿ, ನೆಲಮಂಗಲದಿಂದ 48 ಮಂದಿ ಪ್ರವಾಸ ಕೈಗೊಂಡಿದ್ದರು. ಆ ತಂಡದಲ್ಲಿ ಬ್ಯಾಟಪ್ಪ ಇದ್ದರು.