‘ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಎಷ್ಟೆಲ್ಲ ತೊಂದರೆ ಆಗಿದೆ. ಅಲ್ಲಿಗೆ ಕೇಂದ್ರದಿಂದ ನೆರವು ತರುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏನನ್ನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಇನ್ನೂ ಮಂತ್ರಿಮಂಡಲವೇ ರಚನೆ ಆಗಿಲ್ಲ. ಪ್ರಧಾನಿಗಳೇ ರಾಜ್ಯಕ್ಕೆ ಇಂತಿಷ್ಟು ನೆರವು ನೀಡುತ್ತೇವೆ ಎಂದು ಘೋಷಿಸಬಹುದಿತ್ತು. ಆದರೆ ಬಿಜೆಪಿಯವರು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ದೂರಿದರು.