ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಅರಿವು ಭಾರತ’ದ ಮೌನ ಕ್ರಾಂತಿ: ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಗೋಪಾಲ್

Published : 19 ಜನವರಿ 2026, 4:59 IST
Last Updated : 19 ಜನವರಿ 2026, 4:59 IST
ಫಾಲೋ ಮಾಡಿ
Comments
ದೇವರ ದೃಷ್ಟಿಯಲ್ಲಷ್ಟೇ ಮನುಷ್ಯರೆಲ್ಲಾ ಒಂದು ಎಂಬ ಮಾತು ಮನುಷ್ಯರ ದೃಷ್ಟಿಯಲ್ಲೂ ಸಾಕಾರವಾಗಬೇಕು. ಮನುಷ್ಯ ಸಂಬಂಧಗಳು ಸಮಾಜವನ್ನು ಪ್ರಗತಿ ಕಡೆಗೆ ಕರೆದೊಯ್ಯಬೇಕೇ ಹೊರತು ಒಡೆಯಬಾರದು
– ಎಚ್.ಕೆ. ವಿವೇಕಾನಂದ ಅಂತರಂಗ ಚಳವಳಿ ನೇತಾರ
ಅಸ್ಪೃಶ್ಯತೆ ಮತ್ತು ಜಾತಿಯನ್ನು ಕಾನೂನಿನಿಂದ ಮಾತ್ರ ನಿವಾರಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಅರಿವು ಭಾರತದಂತಹ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತ್ರ ತಾರತಮ್ಯವಿಲ್ಲದ ಸಮಾಜ ನಿರ್ಮಾಣ ಸಾಧ್ಯ
– ಪಂಡಿತ್ ಮುನಿವೆಂಕಟಪ್ಪ ಹಿರಿಯ ದಲಿತ ಮುಖಂಡ
‘ಮನೆಯಿಂದ ನಾಡಿಗೆ ವ್ಯಾಪಿಸಿದ ಚಳವಳಿ’
‘ಅಸ್ಪೃಶ್ಯತೆಯನ್ನು ಅಳಿಸುವ ಈ ಚಳುವಳಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ನಮ್ಮ ಮನೆಯಲ್ಲಿ 12 ವರ್ಷಗಳ ಹಿಂದೆ ಶುರುವಾಯಿತು. ಇದೀಗ ನಮ್ಮ ಜಿಲ್ಲೆ ದಾಟಿ ರಾಜ್ಯದ ಬೇರೆ ಜಿಲ್ಲೆ ಹಾಗೂ ಪಕ್ಕದ ರಾಜ್ಯಕ್ಕೂ ವ್ಯಾಪಿಸಿದೆ. ಗೃಹ ಪ್ರವೇಶದಿಂದ ಶುರುವಾಗಿ ನಂತರ ಸಹ ಭೋಜನ ಸಮಾನತೆಯ ಟೀ ದೇವಸ್ಥಾನ ಪ್ರವೇಶ ಒಂದೇ ಭಾವಿ ಮರು ಮದುವೆವರೆಗೆ ಚಾಚಿಕೊಂಡಿದೆ. ಇದುವರೆಗೆ 600ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಜಾತೀಯತೆ ವಿರುದ್ದ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದೇವೆ. 30ಕ್ಕೂ ಹೆಚ್ಚು ಮರು ಮದುವೆ ನಡೆದಿದೆ’ ಎಂದು ಅರಿವು ಭಾರತದ ಸಂಚಾಲಕ ಡಾ. ಶಿವಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT