<p><strong>ಮಾಗಡಿ</strong>: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಹಾಲಶೆಟ್ಟಿಹಳ್ಳಿಯಲ್ಲಿ ಹೊಸ ಅವರೆ ತಳಿ ಎಚ್.ಎ.–5 ತರಬೇತಿ ಕಾರ್ಯಕ್ರಮ ನಡೆಯಿತು.</p>.<p>ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ರಾಜೇಂದ್ರ ಪ್ರಸಾದ್ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳ ‘ಅವರೆ-5’ ಎಂಬ ಹೊಸ ತಳಿ ಅಭಿವೃದ್ಧಿಪಡಿಸಿ 2022ರಲ್ಲಿ ಬಿಡುಗಡೆಗೊಳಿಸಿದೆ. ಈ ತಳಿ 75ರಿಂದ 80 ದಿನಗಳ ಅವಧಿಯಲ್ಲಿ ಹಸಿಕಾಯಿ ಕಟಾವಿಗೆ ಬರುವ ಅಲ್ಪಾವದಿ ತಳಿ ಎಂದರು.</p>.<p>ಹೂಗಳ ಬಣ್ಣ ಹಸಿರು: ಬಲಿತ ಕಾಯಿಗಳಲ್ಲಿ ತಿಳಿಕಂದು ಬಣ್ಣದ 2-3 ಗುಂಡನೆಯ ಬೀಜಗಳಿದ್ದು ವಿಶೇಷವಾಗಿ ನಾಟಿ ಅವರೆಗೆ ಇರುವಂತೆ ಸೊಗಡು ಹೊಂದಿದ್ದು, ಕಾಯಿಗಳು ನೋಡಲು ಆಕರ್ಷಕವಾಗಿರುತ್ತವೆ ಎಂದು ತಿಳಿಸಿದರು.</p>.<p>ಕೇಂದ್ರದ ವಿಜ್ಞಾನಿ ಪ್ರಮೋದ್ ಮಾತನಾಡಿ, ಪ್ರತಿ ಎಕರೆಗೆ ಹಸಿಕಾಯಿ 10ರಿಂದ 12 ಕ್ವಿಂಟಲ್ ಹಾಗೂ ಕಾಳು 3ರಿಂದ 4 ಕ್ವಿಂಟಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಕೇವಲ ಮೂರು ತಿಂಗಳಿಗೆ ಕಾಯಿ ಕಟಾವಿಗೆ ಬರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ 30 ಜನ ರೈತರಿಗೆ ಅವರೆ ಬಿತ್ತನೆ ಬೀಜ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಹಾಲಶೆಟ್ಟಿಹಳ್ಳಿಯಲ್ಲಿ ಹೊಸ ಅವರೆ ತಳಿ ಎಚ್.ಎ.–5 ತರಬೇತಿ ಕಾರ್ಯಕ್ರಮ ನಡೆಯಿತು.</p>.<p>ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ರಾಜೇಂದ್ರ ಪ್ರಸಾದ್ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳ ‘ಅವರೆ-5’ ಎಂಬ ಹೊಸ ತಳಿ ಅಭಿವೃದ್ಧಿಪಡಿಸಿ 2022ರಲ್ಲಿ ಬಿಡುಗಡೆಗೊಳಿಸಿದೆ. ಈ ತಳಿ 75ರಿಂದ 80 ದಿನಗಳ ಅವಧಿಯಲ್ಲಿ ಹಸಿಕಾಯಿ ಕಟಾವಿಗೆ ಬರುವ ಅಲ್ಪಾವದಿ ತಳಿ ಎಂದರು.</p>.<p>ಹೂಗಳ ಬಣ್ಣ ಹಸಿರು: ಬಲಿತ ಕಾಯಿಗಳಲ್ಲಿ ತಿಳಿಕಂದು ಬಣ್ಣದ 2-3 ಗುಂಡನೆಯ ಬೀಜಗಳಿದ್ದು ವಿಶೇಷವಾಗಿ ನಾಟಿ ಅವರೆಗೆ ಇರುವಂತೆ ಸೊಗಡು ಹೊಂದಿದ್ದು, ಕಾಯಿಗಳು ನೋಡಲು ಆಕರ್ಷಕವಾಗಿರುತ್ತವೆ ಎಂದು ತಿಳಿಸಿದರು.</p>.<p>ಕೇಂದ್ರದ ವಿಜ್ಞಾನಿ ಪ್ರಮೋದ್ ಮಾತನಾಡಿ, ಪ್ರತಿ ಎಕರೆಗೆ ಹಸಿಕಾಯಿ 10ರಿಂದ 12 ಕ್ವಿಂಟಲ್ ಹಾಗೂ ಕಾಳು 3ರಿಂದ 4 ಕ್ವಿಂಟಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಕೇವಲ ಮೂರು ತಿಂಗಳಿಗೆ ಕಾಯಿ ಕಟಾವಿಗೆ ಬರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ 30 ಜನ ರೈತರಿಗೆ ಅವರೆ ಬಿತ್ತನೆ ಬೀಜ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>