ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸ್ಪರ್ಶ: ಕರಡಿ ಮರಿ ಸಾವು

Last Updated 19 ಆಗಸ್ಟ್ 2020, 15:39 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಬಳಿ ಮಂಗಳವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ಎಂಟು ತಿಂಗಳ ಕರಡಿ ಮರಿ ಮೃತಪಟ್ಟಿತು.

ರೈತರ ಜಮೀನಿಗೆ ವಿದ್ಯುತ್ ಸರಬರಾಜಿಗಾಗಿ ಹಾಕಲಾದ ಟ್ರಾನ್ಸ್‌ಫಾರ್ಮರ್‌ನ ಗ್ರೌಂಡಿಂಗ್‌ ಗುಂಡಿಯಲ್ಲಿ ವಿದ್ಯುತ್ ಪ್ರವಹಿಸುತಿತ್ತು. ಇಲ್ಲಿಗೆ ಬಂದ ಕರಡಿ ಮರಿ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದ ಸಂದರ್ಭವೂ ಕಂಬದಲ್ಲಿ ವಿದ್ಯುತ್‌ ಹರಿಯುತ್ತಿದ್ದು, ಸ್ಥಳೀಯರು ಬೆಸ್ಕಾಂಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಿದರು. ಪಶು ವೈದ್ಯ ಡಾ. ನಜೀರ್‌ ಅಹಮ್ಮದ್‌ ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅದರ ಕಳೇಬರವನ್ನು ಸುಡಲಾಯಿತು. ಎಸಿಎಫ್‌ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT