ರೈತರ ಜಮೀನಿಗೆ ವಿದ್ಯುತ್ ಸರಬರಾಜಿಗಾಗಿ ಹಾಕಲಾದ ಟ್ರಾನ್ಸ್ಫಾರ್ಮರ್ನ ಗ್ರೌಂಡಿಂಗ್ ಗುಂಡಿಯಲ್ಲಿ ವಿದ್ಯುತ್ ಪ್ರವಹಿಸುತಿತ್ತು. ಇಲ್ಲಿಗೆ ಬಂದ ಕರಡಿ ಮರಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದ ಸಂದರ್ಭವೂ ಕಂಬದಲ್ಲಿ ವಿದ್ಯುತ್ ಹರಿಯುತ್ತಿದ್ದು, ಸ್ಥಳೀಯರು ಬೆಸ್ಕಾಂಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಿದರು. ಪಶು ವೈದ್ಯ ಡಾ. ನಜೀರ್ ಅಹಮ್ಮದ್ ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅದರ ಕಳೇಬರವನ್ನು ಸುಡಲಾಯಿತು. ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್ ಇದ್ದರು.