ರಾಮನಗರ: ತಾಲೂಕಿನ ಚುಂಚಕ ಗ್ರಾಮದ ಗೌರಮ್ಮ (70) ಎಂಬುವರ ಮೇಲೆ ಕರಡಿಯೊಂದು ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ದಾಳಿ ನಡೆಸಿದೆ.
ಬೆಳಗ್ಗೆ ಗೌರಮ್ಮ ಮನೆಯಿಂದ ಹೊರ ಬಂದ ಸಂದರ್ಭ ಕರಡಿ ದಾಳಿ ನಡೆಸಿದೆ. ಸ್ಥಳದಲ್ಲಿ ಮತ್ತೊಂದು ಕರಡಿ ಸಹ ಇತ್ತು ಎನ್ನಲಾಗಿದೆ.
ದಾಳಿಯಿಂದ ಗೌರಮ್ಮ ಅವರ ಕೈ , ಕಾಲುಗಳಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.