ಇದೇ 21ರಂದು ಬೆಳಿಗ್ಗೆ 10ಕ್ಕೆ ಎಂದಿನಂತೆ ಮನೆಯಿಂದ ಸರ್ಕಾರಿ ವಾಹನದಲ್ಲಿ ಕಚೇರಿಗೆ ತೆರಳಿದ್ದ ಧನ್ಯಶ್ರೀ ಮರಳಿ ಮನೆಗೆ ಬಂದಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಂಧುಗಳು– ಸ್ನೇಹಿತರ ಸಂಪರ್ಕಕ್ಕೆ ಸಿಗುತ್ತಿಲ್ಲ.ಚನ್ನಪಟ್ಟಣ ತಾಲ್ಲೂಕಿನವರೇ ಆದ ಧನ್ಯಶ್ರೀ ಈ ಮೊದಲು ಆನೇಕಲ್ನಲ್ಲಿ ಸೇವೆ ಸಲ್ಲಿಸಿ, ವರ್ಷದ ಹಿಂದೆ ಚನ್ನಪಟ್ಟಣಕ್ಕೆ ವರ್ಗಾವಣೆ ಆಗಿದ್ದರು.