ರಾಮನಗರ: ಕೋವಿಡ್ ಭೀತಿ ನಡುವೆಯೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಶನಿವಾರ ಚನ್ನಪಟ್ಟಣದಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡರು.
ಚನ್ನಪಟ್ಟಣದ ಕಲ್ಯಾಣಮಂಟಪ ಒಂದರಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅವರು 55 ಕೆ.ಜಿ. ತೂಕದ ಕೇಕ್ ಕತ್ತರಿಸಿದರು. ಆದರೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಪರಸ್ಪರ ಅಂತರ ನಿಯಮ ಪಾಲನೆ ಮಾತ್ರ ಮರೆಯಾಗಿತ್ತು.
ಇದೇ ಸಂದರ್ಭ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಸಹ ನಡೆಯಿತು.