<p><strong>ರಾಮನಗರ</strong>: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇದೇ 23ರಿಂದ 28ರವರೆಗೆ ಮೇಕೆದಾಟಿನಿಂದ ವಿಧಾನಸೌಧವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವೂ ಪಾಲ್ಗೊಳ್ಳಲಿದೆ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ಪಿ. ಕೃಷ್ಣೇಗೌಡ ತಿಳಿಸಿದರು.</p>.<p>ರಾಜ್ಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾತ್ವಿಕ ಅಂತ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಈವರೆಗೆ ಬಂದು ಹೋಗಿರುವ ಸರ್ಕಾರಗಳು ಮೇಕೆದಾಟು ವಿಚಾರದಲ್ಲಿ ಬರೀ ಪೊಳ್ಳು ಭರವಸೆಗಳನ್ನೇ ನೀಡಿವೆ. ರಾಜ್ಯದಲ್ಲೊಂದು ಸರ್ಕಾರ, ಕೇಂದ್ರದಲ್ಲೊಂದು ಪಕ್ಷದ ಸರ್ಕಾರ ಇದ್ದಾಗಲಂತೂ ಕನ್ನಡಿಗರ ನೋವನ್ನು ಕೇಳಿದವರಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸಿದ ಹೆಚ್ಚಿನ ಸರ್ಕಾರಗಳು ತಮಿಳುನಾಡನ್ನೇ ಓಲೈಸಿಕೊಂಡು ಬಂದಿವೆ ಎಂದು<br />ದೂರಿದರು.</p>.<p>ಸಂಘಟನೆಯ ಗೌರವ ಅಧ್ಯಕ್ಷ ಉಮರ್ ಹಾಜಿ, ಜಿಲ್ಲಾ ಅಧ್ಯಕ್ಷ ಶಿವುಗೌಡ, ಮುಖಂಡರಾದ ಆರ್. ಪ್ರಭು, ಬಿ. ಶಂಕರದಾಸ್, ಮಹಮದ್ ಕುಕ್ಕವಾಡಿ, ರಾಮಚಂದ್ರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇದೇ 23ರಿಂದ 28ರವರೆಗೆ ಮೇಕೆದಾಟಿನಿಂದ ವಿಧಾನಸೌಧವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವೂ ಪಾಲ್ಗೊಳ್ಳಲಿದೆ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ಪಿ. ಕೃಷ್ಣೇಗೌಡ ತಿಳಿಸಿದರು.</p>.<p>ರಾಜ್ಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾತ್ವಿಕ ಅಂತ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಈವರೆಗೆ ಬಂದು ಹೋಗಿರುವ ಸರ್ಕಾರಗಳು ಮೇಕೆದಾಟು ವಿಚಾರದಲ್ಲಿ ಬರೀ ಪೊಳ್ಳು ಭರವಸೆಗಳನ್ನೇ ನೀಡಿವೆ. ರಾಜ್ಯದಲ್ಲೊಂದು ಸರ್ಕಾರ, ಕೇಂದ್ರದಲ್ಲೊಂದು ಪಕ್ಷದ ಸರ್ಕಾರ ಇದ್ದಾಗಲಂತೂ ಕನ್ನಡಿಗರ ನೋವನ್ನು ಕೇಳಿದವರಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸಿದ ಹೆಚ್ಚಿನ ಸರ್ಕಾರಗಳು ತಮಿಳುನಾಡನ್ನೇ ಓಲೈಸಿಕೊಂಡು ಬಂದಿವೆ ಎಂದು<br />ದೂರಿದರು.</p>.<p>ಸಂಘಟನೆಯ ಗೌರವ ಅಧ್ಯಕ್ಷ ಉಮರ್ ಹಾಜಿ, ಜಿಲ್ಲಾ ಅಧ್ಯಕ್ಷ ಶಿವುಗೌಡ, ಮುಖಂಡರಾದ ಆರ್. ಪ್ರಭು, ಬಿ. ಶಂಕರದಾಸ್, ಮಹಮದ್ ಕುಕ್ಕವಾಡಿ, ರಾಮಚಂದ್ರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>