ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ರಾಮನಗರ ತಾಲ್ಲೂಕಿನ ತೆಂಗಿನಕಲ್ಲು ಗ್ರಾಮದಲ್ಲಿ ದಿನನಿತ್ಯ ರಾತ್ರಿ ಕಾಡಾನೆಗಳ ಹಿಂಡು ತೋಟ, ಜಮೀನುಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವೆ. ಕೊಳವೆಬಾವಿಗೆ ಅಳವಡಿಸಿರುವ ಪೈಪುಗಳನ್ನು ಕಿತ್ತು ರಂಪಾಟ ಮಾಡುತ್ತಿವೆ. ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಕಾಡಾನೆಯೊಂದು ಸಹ ಮೃತಪಟ್ಟಿದೆ ಎಂದರು.