ಸರ್ಕಾರ ನಿಗದಿ ಪಡಿಸಿರುವ ದರದ ಜೊತೆಗೆ ಪ್ರತಿ ರೇಷನ್ ಕಾರ್ಡ್ಗೆ ಪಡಿತರ ವಿತರಣೆಗೆ ₹20 ಹೆಚ್ಚಿಗೆ ಪಡೆಯಲಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ರಸೀತಿ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಪಡಿತರವನ್ನೇ ನೀಡುವುದಿಲ್ಲ ಎಂದು ಕೆಲವು ಗ್ರಾಮಸ್ಥರು ಆರೋಪಿಸಿದರು. ಸರ್ಕಾರವೇ ಶುಲ್ಕ ನಿಗದಿಪಡಿಸಿದ್ದರೆ ಅದನ್ನು ನೀಡಲು ಸಿದ್ಧ. ಆದರೆ, ಹೆಚ್ಚುವರಿ ಶುಲ್ಕವನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಈ ಸಂದರ್ಭ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆಯಿತು.