<p><strong>ಚನ್ನಪಟ್ಟಣ:</strong> ತಪ್ಪಿಸಿಕೊಂಡಿದ್ದ ಹಸುವನ್ನು ಹುಡುಕಿಕೊಂಡು ಹೋದ ರೈತನೊಬ್ಬ ರಾಗಿ ಹೊಲದ ಸುತ್ತ ಹಾಕಿದ್ದ ವಿದ್ಯುತ್ ತಂತಿ ತುಳಿದು ಸ್ಥಳದದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಶ್ಯಾನಭೋಗನಹಳ್ಳಿ ಕಾರೇಕೊಪ್ಪ ಗ್ರಾಮಗಳ ನಡುವೆ ಸೋಮವಾರ ರಾತ್ರಿ ನಡೆದಿದೆ.</p>.<p>ಈರೇಗೌಡ (50) ಮೃತ ರೈತ. ತಮ್ಮ ಹೊಲದ ಬಳಿ ಕಟ್ಟಿಹಾಕಿದ್ದ ಹಸುವೊಂದು ತಪ್ಪಿಸಿಕೊಂಡ ಕಾರಣ ಅದನ್ನು ಹುಡುಕಿಕೊಂಡು ಹೋಗಿದ್ದರು. ರಾಗಿ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹೊಲಕ್ಕೆ ವಿದ್ಯುತ್ ತಂತಿ ಅಳವಡಿಸಿದ್ದನ್ನು ಗಮನಿಸದೆ ಅದನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.</p>.<p>ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>
<p><strong>ಚನ್ನಪಟ್ಟಣ:</strong> ತಪ್ಪಿಸಿಕೊಂಡಿದ್ದ ಹಸುವನ್ನು ಹುಡುಕಿಕೊಂಡು ಹೋದ ರೈತನೊಬ್ಬ ರಾಗಿ ಹೊಲದ ಸುತ್ತ ಹಾಕಿದ್ದ ವಿದ್ಯುತ್ ತಂತಿ ತುಳಿದು ಸ್ಥಳದದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಶ್ಯಾನಭೋಗನಹಳ್ಳಿ ಕಾರೇಕೊಪ್ಪ ಗ್ರಾಮಗಳ ನಡುವೆ ಸೋಮವಾರ ರಾತ್ರಿ ನಡೆದಿದೆ.</p>.<p>ಈರೇಗೌಡ (50) ಮೃತ ರೈತ. ತಮ್ಮ ಹೊಲದ ಬಳಿ ಕಟ್ಟಿಹಾಕಿದ್ದ ಹಸುವೊಂದು ತಪ್ಪಿಸಿಕೊಂಡ ಕಾರಣ ಅದನ್ನು ಹುಡುಕಿಕೊಂಡು ಹೋಗಿದ್ದರು. ರಾಗಿ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹೊಲಕ್ಕೆ ವಿದ್ಯುತ್ ತಂತಿ ಅಳವಡಿಸಿದ್ದನ್ನು ಗಮನಿಸದೆ ಅದನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.</p>.<p>ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>