<p><strong>ಕನಕಪುರ</strong>: ಲಾಕ್ಡೌನ್ನಿಂದ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ಅನುಕೂಲವಾಗಲೆಂದು ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮನೆ ಮನೆಗೆ ರೇಷನ್ ಕಿಟ್ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.</p>.<p>ತಾಲ್ಲೂಕಿನನ ಜಕ್ಕಸಂದ್ರ ಮತ್ತು ಮರಳವಾಡಿ ಗ್ರಾಮದಲ್ಲಿ ರೇಷನ್ ಕಿಟ್ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.</p>.<p>‘ನಮ್ಮ ಕುಟುಂಬ ಯಾವಗಲೂ ಬಡವರ ಪರ. ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರು ರೈತರ ಪರವಾಗಿ ರಾಜಕೀಯ ನಡೆಸುತ್ತಾ ಬಂದವರು. ರೈತರಿಗೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದರು.</p>.<p>ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಆಯ್ದ ಮುಖಂಡರ ನೆರವಿನೊಂದಿಗೆ ಹಂಚಿಕೆ ಮಾಡಲಾಗುತ್ತಿದೆ. ವಿಶೇಷವಾಗಿ ದಿನಗೂಲಿ ನೌಕರರು, ಕಾರ್ಮಿಕರಿಗೆ ತುಂಬಾ ಕಷ್ಟವಾಗಿದೆ. ಎಲ್ಲರೂ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಸ್ಥಳೀಯ ಮುಖಂಡರ ನೆರವಿನೊಂದಿಗೆ ಆಹಾರ ಕಿಟ್ಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಲಾಕ್ಡೌನ್ ಮುಗಿದ ಬಳಿಕ ತಾಯಿ ಅನಿತಾ ಅವರ ಜತೆಗೂಡಿ ಗ್ರಾಮ ಮಟ್ಟದಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವುದಾಗಿ ತಿಳಿಸಿದರು.</p>.<p>ಜೆಡಿಎಸ್ ರಾಮನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್, ಪಕ್ಷದ ಮುಖಂಡರಾದ ಡಿ.ಎಸ್.ಭುಜಂಗಯ್ಯ, ರಾಮಕೃಷ್ಣಪ್ಪ, ಈರೇಗೌಡ, ಕೆ.ಎನ್.ರಾಮು, ಕೆ.ಎನ್.ಲಕ್ಷ್ಮಣ್, ಬನ್ನಿಕುಪ್ಪೆ ರಾಜು, ಸಿದ್ದಪ್ಪ, ಮಲ್ಲಯ್ಯ, ತಿಮ್ಮಪ್ಪ, ಸಿದ್ದರಾಜು, ರವಿ, ಕರಿಯಪ್ಪ, ಪ್ರವೀಣ್, ಶಿವರಾಜು, ಮಾದೇವ, ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಲಾಕ್ಡೌನ್ನಿಂದ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ಅನುಕೂಲವಾಗಲೆಂದು ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮನೆ ಮನೆಗೆ ರೇಷನ್ ಕಿಟ್ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.</p>.<p>ತಾಲ್ಲೂಕಿನನ ಜಕ್ಕಸಂದ್ರ ಮತ್ತು ಮರಳವಾಡಿ ಗ್ರಾಮದಲ್ಲಿ ರೇಷನ್ ಕಿಟ್ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.</p>.<p>‘ನಮ್ಮ ಕುಟುಂಬ ಯಾವಗಲೂ ಬಡವರ ಪರ. ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರು ರೈತರ ಪರವಾಗಿ ರಾಜಕೀಯ ನಡೆಸುತ್ತಾ ಬಂದವರು. ರೈತರಿಗೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದರು.</p>.<p>ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಆಯ್ದ ಮುಖಂಡರ ನೆರವಿನೊಂದಿಗೆ ಹಂಚಿಕೆ ಮಾಡಲಾಗುತ್ತಿದೆ. ವಿಶೇಷವಾಗಿ ದಿನಗೂಲಿ ನೌಕರರು, ಕಾರ್ಮಿಕರಿಗೆ ತುಂಬಾ ಕಷ್ಟವಾಗಿದೆ. ಎಲ್ಲರೂ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಸ್ಥಳೀಯ ಮುಖಂಡರ ನೆರವಿನೊಂದಿಗೆ ಆಹಾರ ಕಿಟ್ಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಲಾಕ್ಡೌನ್ ಮುಗಿದ ಬಳಿಕ ತಾಯಿ ಅನಿತಾ ಅವರ ಜತೆಗೂಡಿ ಗ್ರಾಮ ಮಟ್ಟದಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವುದಾಗಿ ತಿಳಿಸಿದರು.</p>.<p>ಜೆಡಿಎಸ್ ರಾಮನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್, ಪಕ್ಷದ ಮುಖಂಡರಾದ ಡಿ.ಎಸ್.ಭುಜಂಗಯ್ಯ, ರಾಮಕೃಷ್ಣಪ್ಪ, ಈರೇಗೌಡ, ಕೆ.ಎನ್.ರಾಮು, ಕೆ.ಎನ್.ಲಕ್ಷ್ಮಣ್, ಬನ್ನಿಕುಪ್ಪೆ ರಾಜು, ಸಿದ್ದಪ್ಪ, ಮಲ್ಲಯ್ಯ, ತಿಮ್ಮಪ್ಪ, ಸಿದ್ದರಾಜು, ರವಿ, ಕರಿಯಪ್ಪ, ಪ್ರವೀಣ್, ಶಿವರಾಜು, ಮಾದೇವ, ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>