<p><strong>ಕನಕಪುರ:</strong> ಬಡವರಿಗೆ ನಿವೇಶನ ನೀಡಲು ಆಶ್ರಯ ಯೋಜನೆಯಡಿ ಸರ್ಕಾರ ಖರೀದಿ ಮಾಡಿದ್ದ ಜಮೀನಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಅಮಾನತುಗೊಂಡಿರುವ ಆರ್ಐ ತಂಗರಾಜು, ವಿ.ಎ ಚಂದ್ರೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.</p>.<p>ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮದ ಸರ್ವೆ ನಂಬರ್ 383/2 ರಲ್ಲಿ 2.37 ಎಕರೆ ಜಮೀನನ್ನು 10-8-1992ರಲ್ಲಿ ಗೂಳಯ್ಯ ಕಾಳ ಮಾದಯ್ಯ ಅವರಿಂದ ₹95 ಸಾವಿರಕ್ಕೆ ಖರೀದಿ ಮಾಡಿ ತಹಶೀಲ್ದಾರ್ ಹೆಸರಿನಲ್ಲಿ ಕ್ರಯದ ನೋಂದಣಿ ಮಾಡಲಾಗಿತ್ತು.</p>.<p>ಇದೇ ಜಾಗದಲ್ಲಿ 26-2-1997ರಲ್ಲಿ ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದರು.</p>.<p>ಆದರೆ, ತಹಶೀಲ್ದಾರ್ ಹೆಸರಿಗೆ ಖರೀದಿ ಮಾಡಿ ಕ್ರಯ ಪತ್ರ ಮಾಡಿದ್ದ ಜಮೀನಿನ ಖಾತೆ ಬದಲಾವಣೆ ಆಗದೆ ಮೂಲ ಖಾತೆದಾರರ ಹೆಸರಿನಲ್ಲಿ ಉಳಿದಿತ್ತು.</p>.<p>ಈ ಮಾಹಿತಿಯನ್ನು ತಿಳಿದ ಮೂಲ ಜಮೀನಿನ ಮಾಲೀಕರ ಕುಟುಂಬದವರು ಆರ್ಐ ತಂಗರಾಜು ಮತ್ತು ವಿ.ಎ ಚಂದ್ರೇಗೌಡ ಅವರ ಮೂಲಕ ಪೌತಿ ಖಾತೆ ಮಾಡಿಸಿಕೊಂಡಿದ್ದಾರೆ.</p>.<p>ಆಶ್ರಯ ಯೋಜನೆಗಾಗಿ ಸರ್ಕಾರಕ್ಕೆ ಖರೀದಿಯಾಗಿ ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿರುವ ಮಾಹಿತಿ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಲಂಚ ಪಡೆದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅದೇ ಜಮೀನಿಗೆ 31-01-2023ರಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಜಗದೀಶ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಬಡವರಿಗೆ ನಿವೇಶನ ನೀಡಲು ಆಶ್ರಯ ಯೋಜನೆಯಡಿ ಸರ್ಕಾರ ಖರೀದಿ ಮಾಡಿದ್ದ ಜಮೀನಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಅಮಾನತುಗೊಂಡಿರುವ ಆರ್ಐ ತಂಗರಾಜು, ವಿ.ಎ ಚಂದ್ರೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.</p>.<p>ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮದ ಸರ್ವೆ ನಂಬರ್ 383/2 ರಲ್ಲಿ 2.37 ಎಕರೆ ಜಮೀನನ್ನು 10-8-1992ರಲ್ಲಿ ಗೂಳಯ್ಯ ಕಾಳ ಮಾದಯ್ಯ ಅವರಿಂದ ₹95 ಸಾವಿರಕ್ಕೆ ಖರೀದಿ ಮಾಡಿ ತಹಶೀಲ್ದಾರ್ ಹೆಸರಿನಲ್ಲಿ ಕ್ರಯದ ನೋಂದಣಿ ಮಾಡಲಾಗಿತ್ತು.</p>.<p>ಇದೇ ಜಾಗದಲ್ಲಿ 26-2-1997ರಲ್ಲಿ ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದರು.</p>.<p>ಆದರೆ, ತಹಶೀಲ್ದಾರ್ ಹೆಸರಿಗೆ ಖರೀದಿ ಮಾಡಿ ಕ್ರಯ ಪತ್ರ ಮಾಡಿದ್ದ ಜಮೀನಿನ ಖಾತೆ ಬದಲಾವಣೆ ಆಗದೆ ಮೂಲ ಖಾತೆದಾರರ ಹೆಸರಿನಲ್ಲಿ ಉಳಿದಿತ್ತು.</p>.<p>ಈ ಮಾಹಿತಿಯನ್ನು ತಿಳಿದ ಮೂಲ ಜಮೀನಿನ ಮಾಲೀಕರ ಕುಟುಂಬದವರು ಆರ್ಐ ತಂಗರಾಜು ಮತ್ತು ವಿ.ಎ ಚಂದ್ರೇಗೌಡ ಅವರ ಮೂಲಕ ಪೌತಿ ಖಾತೆ ಮಾಡಿಸಿಕೊಂಡಿದ್ದಾರೆ.</p>.<p>ಆಶ್ರಯ ಯೋಜನೆಗಾಗಿ ಸರ್ಕಾರಕ್ಕೆ ಖರೀದಿಯಾಗಿ ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿರುವ ಮಾಹಿತಿ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಲಂಚ ಪಡೆದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅದೇ ಜಮೀನಿಗೆ 31-01-2023ರಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಜಗದೀಶ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>