ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಲಕ್ಷ್ಮೀದೇವಿ ಅಗ್ನಿಕೊಂಡಹಾಯುವಾಗ ಉರುಳಿಬಿದ್ದು 8 ಜನ ಗಾಯಗೊಂಡರು.
ಸೋಮವಾರ ರಾತ್ರಿ10.30ರಲ್ಲಿ ಪೂಜಾರಿ ಕೊಂಡ ಹಾಯುವ ಮುನ್ನ ಅಗ್ನಿಕುಂಡದಲ್ಲಿ 56 ಜನ ಹರಕೆ ಹೊತ್ತ ಭಕ್ತರು ಕೊಂಡಕ್ಕೆ ಇಳಿದರು.
ರಮೇಶ್ ಎಂಬುವರು ಕೆಂಡದ ಮೇಲೆ ನಡೆಯುವಾಗ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡರು. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾದವು.ರಮೇಶ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.