ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ನೇತೃತ್ವದಲ್ಲಿ ಸೋಮವಾರ ಮುಂಜಾನೆಯಿಂದಲೇ, 5 ಟ್ರ್ಯಾಕ್ಟರ್ಗಳಿಗೆ ಜನರೇಟರ್ ಬಳಸಿ ಕಲ್ಯಾಣಿಯ ನೀರು ಹೊರಗೆ ಹರಿಸಲಾಯಿತು. ಒಂದು ಗಂಟೆಯ ವೇಳೆಗೆ ಶವ ಪತ್ತೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರ್, ಮಾದೇಗೌಡ, ಚವ್ಹಾಣ್, ರಮೇಶ್ ತಂಡದವರೊಂದಿಗೆ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಹಕರಿಸಿದರು.