ವರದಿ ಬೆನ್ನಲ್ಲೇ ನಗರಸಭೆ ಎಚ್ಚೆತ್ತುಕೊಂಡಿತ್ತು. ಪೌರಾಯುಕ್ತ ಎಲ್. ನಾಗೇಶ್ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯರ ಜೊತೆ ಮಾತುಕತೆ ನಡೆಸಿ ತ್ಯಾಜ್ಯ ತೆರವಿನ ಭರವಸೆ ನೀಡಿದ್ದರು. ಅದರಂತೆ, ಸ್ಥಳದಲ್ಲಿ ಜೆಸಿಬಿ ಹಾಗೂ ಟಿಪ್ಪರ್ ಲಾರಿಗಳ ಮೂಲಕ ಕಸ ತೆರವುಗೊಳಿಸಿ, ತ್ಯಾಜ್ಯದ ದುರ್ನಾತ ಬೀರದಂತೆ ಮಣ್ಣು ಹಾಕಿದ್ದಾರೆ.