<p><strong>ಕನಕಪುರ</strong>: ಅಡುಗೆ ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು, ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಕನಕಪುರ ಅಮರನಾರಾಯಣ ಬ್ಲಾಕ್ನಲ್ಲಿ ಸೋಮವಾರ ಈ ಘಟನೆ ನಡೆದಿದೆ. </p>.<p>ಪ್ರಶಾಂತ್ (22), ಅವರ ತಾಯಿ ಸವಿತಾ (45) ಮತ್ತು ತಂದೆ ಸಿದ್ದರಾಜು (50) ಗಾಯಗೊಂಡವರು. ಪ್ರಶಾಂತ್ ಸ್ಥಿತಿ ಗಂಭೀರವಾಗಿದೆ.</p>.<p>ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೋಂಡ ಮತ್ತು ಕಾರ ಮಿಕ್ಸರ್ ಮಾರುವ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್, ಸೋಮವಾರ ಮನೆಯಲ್ಲೇ ಕಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿದೆ.</p>.<p>ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಶಾಂತ್, ಸಿಲಿಂಡರ್ ಹೊತ್ತಿಕೊಂಡು ಮನೆಗೆ ಬೆಂಕಿ ಹತ್ತಬಹುದೆಂದು ಭಯಪಟ್ಟು ಅದನ್ನು ನಂದಿಸಲು ನೀರಿನ ತೊಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅವರಿಗೆ ತೀವ್ರವಾಗಿ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳಾದವು.</p>.<p>ಮೂವರು ಗಾಯಾಳುಗಳಿಗೆ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.</p>.<p>ಕನಕಪುರ: ಮನೆಯಲ್ಲಿ ಹೋಟೆಲ್ ನ ತಿಂಡಿ ತಯಾರಿಸುವಾಗ ಸಿಲಿಂಡರ್ ಪೈಪಿನಲ್ಲಿ ಗ್ಯಾಸ್ ಲೀಕೇಜ್ ಹಾಗಿ ಹೊತ್ತಿಕೊಂಡು ಬೆಂಕಿಯಿಂದ ಒಂದೆ ಕುಟುಂಬದ ಮೂವರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಕನಕಪುರ ನಗರದ ಅಮರ ನಾರಾಯಣ ಬ್ಲಾಕ್ ನಲ್ಲಿ ಸೋಮವಾರ ನಡೆದಿದೆ.</p>.<p>ನಗರದ ರಾಮನಗರ ರಸ್ತೆಯಲ್ಲಿ ಬರುವ ಅಮರನಾರಾಯಣ ಬ್ಲಾಕ್ ನ ನಿವಾಸಿ ಪ್ರಶಾಂತ್ (22), ಅವರ ತಾಯಿ ಸವಿತ(45), ತಂದೆ ಸಿದ್ದರಾಜು (50) ಘಟನೆಯಲ್ಲಿ ಗಾಯಗೊಂಡವರಾಗಿದ್ದು, ಅದರಲ್ಲಿ ಪ್ರಶಾಂತ್ ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.</p>.<p>ರಾಮನಗರ ರಸ್ತೆಯ ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ ಬೋಂಡದ ಕಾರ ಮಿಕ್ಸರ್ ಹೋಟೆಲ್ ವ್ಯಾಪಾರ ಮಾಡುವ ಪ್ರಶಾಂತ್ ಸೋಮವಾರ ಮನೆಯಲ್ಲಿ ಕಾರ ಮಿಕ್ಸರ್ ತಯಾರಿ ಮಾಡುತ್ತಿದ್ದಾಗ ಸಿಲಿಂಡರ್ ನ ಪೈಪ್ ನಲ್ಲಿ ಗ್ಯಾಸ್ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ.</p>.<p>ಬೆಂಕಿ ತಗಲಿ ಸುಟ್ಟ ಗಾಯಗಳಾದಾಗ ಭಯಗೊಂಡ ಪ್ರಶಾಂತ್ ಮತ್ತು ಅವರ ತಂದೆ, ತಾಯಿ ಗ್ಯಾಸ್ ಸ್ಟವ್ ಸಿಲಿಂಡರ್ ಅಲ್ಲೇ ಬಿಟ್ಟು ಮನೆಯ ಒಳಗೆ ಓಡಿದ್ದಾರೆ.</p>.<p>ಸಿಲಿಂಡರ್ ನಿಂದ ಹೊತ್ತಿಕೊಂಡಿದ್ದ ಬೆಂಕಿಯು ಜಾಸ್ತಿ ಆಗುತ್ತಿದ್ದಂತೆ ಮನೆಯು ಹತ್ತಿ ಕೊಳ್ಳುತ್ತದೆ ಎಂಬ ಭಯದಲ್ಲಿ ಸಿಲಿಂಡರನ್ನು ನೀರಿನ ತೊಟ್ಟಿಯಲ್ಲಿ ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದಾಗ ಪ್ರಶಾಂತ್ ಗೆ ಹೆಚ್ಚಿನ ಬೆಂಕಿ ತಗುಲಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದಾರೆ.</p>.<p>ಮನೆಯ ಅಕ್ಕಪಕ್ಕದವರು ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ, ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.</p>.<p>ಘಟನೆಯಲ್ಲಿ ಗಾಯಗೊಂಡ ಮೂವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಘಟನೆಯ ಮಾಹಿತಿ ತಿಳಿದ ಗ್ಯಾಸ್ ಏಜೆನ್ಸಿ ಅವರು ಕಠಿಣ ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಪರಿಶೀಲಿಸಿ ಮನೆಯ ಒಳಗಡೆ ಇದ್ದಂತಹ ಗ್ಯಾಸ್ ತುಂಬಿದ್ದ ಮತ್ತೊಂದು ಸಿಲಿಂಡರನ್ನು ಹೊರಗಡೆ ತೆಗೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಅಡುಗೆ ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು, ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಕನಕಪುರ ಅಮರನಾರಾಯಣ ಬ್ಲಾಕ್ನಲ್ಲಿ ಸೋಮವಾರ ಈ ಘಟನೆ ನಡೆದಿದೆ. </p>.<p>ಪ್ರಶಾಂತ್ (22), ಅವರ ತಾಯಿ ಸವಿತಾ (45) ಮತ್ತು ತಂದೆ ಸಿದ್ದರಾಜು (50) ಗಾಯಗೊಂಡವರು. ಪ್ರಶಾಂತ್ ಸ್ಥಿತಿ ಗಂಭೀರವಾಗಿದೆ.</p>.<p>ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೋಂಡ ಮತ್ತು ಕಾರ ಮಿಕ್ಸರ್ ಮಾರುವ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್, ಸೋಮವಾರ ಮನೆಯಲ್ಲೇ ಕಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿದೆ.</p>.<p>ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಶಾಂತ್, ಸಿಲಿಂಡರ್ ಹೊತ್ತಿಕೊಂಡು ಮನೆಗೆ ಬೆಂಕಿ ಹತ್ತಬಹುದೆಂದು ಭಯಪಟ್ಟು ಅದನ್ನು ನಂದಿಸಲು ನೀರಿನ ತೊಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅವರಿಗೆ ತೀವ್ರವಾಗಿ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳಾದವು.</p>.<p>ಮೂವರು ಗಾಯಾಳುಗಳಿಗೆ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.</p>.<p>ಕನಕಪುರ: ಮನೆಯಲ್ಲಿ ಹೋಟೆಲ್ ನ ತಿಂಡಿ ತಯಾರಿಸುವಾಗ ಸಿಲಿಂಡರ್ ಪೈಪಿನಲ್ಲಿ ಗ್ಯಾಸ್ ಲೀಕೇಜ್ ಹಾಗಿ ಹೊತ್ತಿಕೊಂಡು ಬೆಂಕಿಯಿಂದ ಒಂದೆ ಕುಟುಂಬದ ಮೂವರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಕನಕಪುರ ನಗರದ ಅಮರ ನಾರಾಯಣ ಬ್ಲಾಕ್ ನಲ್ಲಿ ಸೋಮವಾರ ನಡೆದಿದೆ.</p>.<p>ನಗರದ ರಾಮನಗರ ರಸ್ತೆಯಲ್ಲಿ ಬರುವ ಅಮರನಾರಾಯಣ ಬ್ಲಾಕ್ ನ ನಿವಾಸಿ ಪ್ರಶಾಂತ್ (22), ಅವರ ತಾಯಿ ಸವಿತ(45), ತಂದೆ ಸಿದ್ದರಾಜು (50) ಘಟನೆಯಲ್ಲಿ ಗಾಯಗೊಂಡವರಾಗಿದ್ದು, ಅದರಲ್ಲಿ ಪ್ರಶಾಂತ್ ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.</p>.<p>ರಾಮನಗರ ರಸ್ತೆಯ ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ ಬೋಂಡದ ಕಾರ ಮಿಕ್ಸರ್ ಹೋಟೆಲ್ ವ್ಯಾಪಾರ ಮಾಡುವ ಪ್ರಶಾಂತ್ ಸೋಮವಾರ ಮನೆಯಲ್ಲಿ ಕಾರ ಮಿಕ್ಸರ್ ತಯಾರಿ ಮಾಡುತ್ತಿದ್ದಾಗ ಸಿಲಿಂಡರ್ ನ ಪೈಪ್ ನಲ್ಲಿ ಗ್ಯಾಸ್ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ.</p>.<p>ಬೆಂಕಿ ತಗಲಿ ಸುಟ್ಟ ಗಾಯಗಳಾದಾಗ ಭಯಗೊಂಡ ಪ್ರಶಾಂತ್ ಮತ್ತು ಅವರ ತಂದೆ, ತಾಯಿ ಗ್ಯಾಸ್ ಸ್ಟವ್ ಸಿಲಿಂಡರ್ ಅಲ್ಲೇ ಬಿಟ್ಟು ಮನೆಯ ಒಳಗೆ ಓಡಿದ್ದಾರೆ.</p>.<p>ಸಿಲಿಂಡರ್ ನಿಂದ ಹೊತ್ತಿಕೊಂಡಿದ್ದ ಬೆಂಕಿಯು ಜಾಸ್ತಿ ಆಗುತ್ತಿದ್ದಂತೆ ಮನೆಯು ಹತ್ತಿ ಕೊಳ್ಳುತ್ತದೆ ಎಂಬ ಭಯದಲ್ಲಿ ಸಿಲಿಂಡರನ್ನು ನೀರಿನ ತೊಟ್ಟಿಯಲ್ಲಿ ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದಾಗ ಪ್ರಶಾಂತ್ ಗೆ ಹೆಚ್ಚಿನ ಬೆಂಕಿ ತಗುಲಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದಾರೆ.</p>.<p>ಮನೆಯ ಅಕ್ಕಪಕ್ಕದವರು ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ, ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.</p>.<p>ಘಟನೆಯಲ್ಲಿ ಗಾಯಗೊಂಡ ಮೂವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಘಟನೆಯ ಮಾಹಿತಿ ತಿಳಿದ ಗ್ಯಾಸ್ ಏಜೆನ್ಸಿ ಅವರು ಕಠಿಣ ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಪರಿಶೀಲಿಸಿ ಮನೆಯ ಒಳಗಡೆ ಇದ್ದಂತಹ ಗ್ಯಾಸ್ ತುಂಬಿದ್ದ ಮತ್ತೊಂದು ಸಿಲಿಂಡರನ್ನು ಹೊರಗಡೆ ತೆಗೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>