ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆಯ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಮಧ್ಯೆ ದೇವರ ಚಿತ್ರ!

Published 28 ಏಪ್ರಿಲ್ 2024, 6:45 IST
Last Updated 28 ಏಪ್ರಿಲ್ 2024, 6:45 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿವಿಧೆಡೆ ಮತದಾರರಿಗೆ ಹಂಚಲಾಗಿರುವ ಕಾಂಗ್ರೆಸ್‌ ಪ್ರಣಾಳಿಕೆಯ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಮಧ್ಯೆ ದೇವರ ಫೋಟೊಗಳಿವೆ. ಮತದಾನಕ್ಕೆ ಹಿಂದಿನ ದಿನವಾದ ಗುರುವಾರ (ಏಪ್ರಿಲ್ 25) ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧೆಡೆ ಹಂಚಲಾಗಿರುವ ಕಾರ್ಡ್‌ಗಳ ಮಧ್ಯೆ ದೇವರ ಚಿತ್ರವಿದೆ.

ಕಾರ್ಡ್‌ಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವಚಿತ್ರಗಳಿದ್ದು ಚನ್ನಪಟ್ಟಣದ ಕೆಲವು ಭಾಗದಲ್ಲಿ ವಿತರಿಸಲಾಗಿದೆ. ಕಾರ್ಡ್‌ ತೆರೆದಾಗ ಒಂದು ಕಡೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಭಾವಚಿತ್ರದೊಂದಿಗೆ ಕೆಂಗಲ್ ಹನುಮಂತಯ್ಯ ಸ್ವಾಮಿ ದೇವರ ಚಿತ್ರವಿದೆ. ಮತ್ತೊಂದು ಕಡೆ ಕುಸುಮಾ ಭಾವಚಿತ್ರದೊಂದಿಗೆ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಚಿತ್ರವಿದೆ.

ಕ್ಯೂ ಆರ್ ಕೋಡ್ ಮತ್ತು ಕ್ರಮ ಸಂಖ್ಯೆ ಹೊಂದಿರುವ ಕಾರ್ಡ್‌ನ ಒಂದು ಕಡೆ ರಾಜ್ಯದ ಗ್ಯಾರಂಟಿ ಯೋಜನೆಗಳು ಹಾಗೂ ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಘೋಷಣೆಗಳಿವೆ ಎಂದು ಕಾರ್ಡ್ ಪಡೆದಿರುವ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT