<p><strong>ಕನಕಪುರ</strong>: ತಾಲ್ಲೂಕಿನ ಪ್ರಸಿದ್ಧ ಚಿಕ್ಕ ತಿರುಪತಿಯೆಂದೇ ಹೆಸರಾಗಿರುವ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯವನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿಲ್ಲ. ಆದರೆ, ದೇವಾಲಯದ ಹುಂಡಿ ಹಣವನ್ನು ಮಾತ್ರ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಭಕ್ತರು ದೂರುತ್ತಾರೆ.</p>.<p>ಸುಮಾರು 800 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯ ಇದಾಗಿದೆ. ತುಂಬಾ ಪ್ರಸಿದ್ಧ ದೇಗುಲವಾಗಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ.ವಾರ್ಷಿಕವಾಗಿ ದೇವಾಲಯದ ಹುಂಡಿಯಲ್ಲಿ ₹40 ರಿಂದ ₹50 ಲಕ್ಷ ಸಂಗ್ರಹವಾಗುತ್ತದೆ.</p>.<p>ಇಷ್ಟು ಪ್ರಮಾಣದ ಆದಾಯವಿರುವ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ‘ಎ’ ಶ್ರೇಣಿ ಹೊಂದಿದೆ. ಜಾತ್ರೆ ಸಂದರ್ಭದಲ್ಲಿ ಮಾತ್ರವೇ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿಯಲಾಗುತ್ತದೆ. ಇದನ್ನು ಹೊರತುಪಡಿಸಿ, ದೇವಸ್ಥಾನದ ಇತರೆ ಅಭಿವೃದ್ಧಿಗೆ ನಯಾಪೈಸೆಯನ್ನೂ ಸರ್ಕಾರ ನೀಡುತ್ತಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಸರ್ಕಾರ ಈವರೆಗೂ ಹಳೆಯದಾದ ದೇವಾಲಯವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಬೆಂಗಳೂರಿನ ಸಿಂದೆ ಬ್ರದರ್ಸ್ ಕುಟುಂಬವು ದೇವಾಲಯದ ಜೀರ್ಣೋದ್ಧಾರ ಮಾಡಿದೆ. ದೇವಾಲಯದ ಸುತ್ತಲೂ ತಡೆಗೋಡೆ ನಿರ್ಮಿಸಿ, ದೇವಸ್ಥಾನದ ಹೆಬ್ಬಾಗಿಲಿಗೆ ರಾಜಗೋಪುರವನ್ನು ನಿರ್ಮಿಸಿದ್ದಾರೆ.</p>.<p>ದೇವಾಲಯದ ಮುಂದಿನ ಜಾಗದಲ್ಲಿ ಕಲ್ಯಾಣ ನಿರ್ಮಿಸಲು ಸಿಂದೆ ಬ್ರದರ್ಸ್ ಕುಟುಂಬ ನಿರ್ಧರಿಸಿತ್ತು. ಆದರೆ, ಸರಿಯಾದ ಸಹಕಾರ ಸಿಗದ ಕಾರಣ ಇದು ಸಾಕಾರಗೊಂಡಿಲ್ಲ. ಈ ಜಾಗದಲ್ಲಿ ವಾಸವಿದ್ದವರು ಮನೆಗಳನ್ನು ಖಾಲಿ ಮಾಡಿದ್ದಾರೆ. ಕೆಲವರು ಹಿತ್ತಲು ಜಾಗವನ್ನು ತಿಪ್ಪೆ ಮಾಡಿಕೊಂಡಿದ್ದಾರೆ.</p>.<p>ದೇವಾಲಯಕ್ಕೆ ಬರುವ ಭಕ್ತರಿಗಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವು ಸಂದರ್ಭದಲ್ಲಿ ಬಾಗಿಲು ಹಾಕಿರುತ್ತಾರೆ. ದೇವಾಲಯದ ಮುಂಭಾಗ, ಸುತ್ತಲೂ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ಸ್ವಚ್ಛತೆಯಿಲ್ಲವೆಂದು ಗ್ರಾಮಸ್ಥರು ದೂರುತ್ತಾರೆ.</p>.<p>ನಿತ್ಯಾ ಪೂಜಾ ಸಮಿತಿಯವರು ಶ್ರಾವಣ ಶನಿವಾರದ ದಿನಗಳಲ್ಲಿ ಬೆಳಿಗ್ಗೆ ಪ್ರಸಾದ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತಾರೆ. ಜಾತ್ರೆ ಸಂದರ್ಭದಲ್ಲಿ ದೇವರು ಮತ್ತು ತೇರಿನ<br />ಶೃಂಗಾರವನ್ನು ಭಕ್ತರೇ ಮಾಡುತ್ತಾರೆ.ಆದರೆ, ದೇಗುಲದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಇಲ್ಲ<br />ಎನ್ನುವುದು ಭಕ್ತರು ಮತ್ತು ತಾಲ್ಲೂಕಿನ ಜನತೆಯ ಆರೋಪವಾಗಿದೆ.</p>.<p>ಮೂರು ವರ್ಷವಾದರೂ ದುರಸ್ತಿಯಾಗದ ಕಳಶ</p>.<p>ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಎಲ್ಲಾ ಚಟುವಟಿಕೆಗಳು ಭಕ್ತರ ಸಹಕಾರದಿಂದಲೇ ನಡೆಯುತ್ತಿವೆ. ದೇವಸ್ಥಾನದ ತೇರು, ತೇರಿನ ಮನೆ, ದಾಸೋಹ ಭವನವನ್ನೂ ಭಕ್ತರೇ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ, ವಿಶೇಷ ಸಂದರ್ಭ, ಹಬ್ಬ, ಜಾತ್ರೆ ವೇಳೆ ದಾಸೋಹ ಮತ್ತು ಪ್ರಸಾದ ವಿತರಣೆಯು ಭಕ್ತರ ಸಹಕಾರದಿಂದಲೇ ನಡೆಯುತ್ತಿದೆ.</p>.<p>ಅಂದಿನ ಕಾಲದಲ್ಲಿ ನಿರ್ಮಿಸಿದ್ದ ಗರ್ಭಗುಡಿ ಮೇಲೆ ಅಂದು ಪ್ರತಿಷ್ಠಾಪಿಸಿದ್ದ ಕಳಶಕ್ಕೆ ಹಾನಿಯಾಗಿ 3 ವರ್ಷವೇ ಆಗಿದೆ. ಆದರೆ, ಅದನ್ನು ಇನ್ನೂ ಸರಿಪಡಿಸಿಲ್ಲ. ದಾಸೋಹ ಭವನ ಅಭಿವೃದ್ಧಿಯು ಅರ್ಧಕ್ಕೆ ನಿಂತಿದೆ. ತೇರಿನ ಮನೆಯ ಬಾಗಿಲು ಮುರಿದು 3 ವರ್ಷವೇ ಆಗಿದ್ದು, ಇನ್ನೂ ದುರಸ್ತಿಗೊಳಿಸಿಲ್ಲ. ತೇರನ್ನು ಸದ್ಯಕ್ಕೆ ಅದರಲ್ಲೇ ನಿಲ್ಲಿಸಲಾಗುತ್ತಿದೆ.ತೇರಿನ ಮನೆಗೆ ಬಾಗಿಲು ಹಾಕದಿರುವುದರಿಂದ ಕಿಡಿಕೇಡಿಗಳು ತೇರಿಗೆ ಹಾನಿ ಮಾಡಬಹುದು ಎಂದು ಭಕ್ತರು ಆತಂಕವಾಗಿದೆ.</p>.<p>ಗರ್ಭಗುಡಿಯ ಮೇಲಿನ ಕಳಶ ಮುರಿದು, ಭಿನ್ನವಾಗಿದೆ. ಆದರೂ ಅದನ್ನು ಸರಿಪಡಿಸುತ್ತಿಲ್ಲ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಾಲ್ಲೂಕಿನ ಪ್ರಸಿದ್ಧ ಚಿಕ್ಕ ತಿರುಪತಿಯೆಂದೇ ಹೆಸರಾಗಿರುವ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯವನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿಲ್ಲ. ಆದರೆ, ದೇವಾಲಯದ ಹುಂಡಿ ಹಣವನ್ನು ಮಾತ್ರ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಭಕ್ತರು ದೂರುತ್ತಾರೆ.</p>.<p>ಸುಮಾರು 800 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯ ಇದಾಗಿದೆ. ತುಂಬಾ ಪ್ರಸಿದ್ಧ ದೇಗುಲವಾಗಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ.ವಾರ್ಷಿಕವಾಗಿ ದೇವಾಲಯದ ಹುಂಡಿಯಲ್ಲಿ ₹40 ರಿಂದ ₹50 ಲಕ್ಷ ಸಂಗ್ರಹವಾಗುತ್ತದೆ.</p>.<p>ಇಷ್ಟು ಪ್ರಮಾಣದ ಆದಾಯವಿರುವ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ‘ಎ’ ಶ್ರೇಣಿ ಹೊಂದಿದೆ. ಜಾತ್ರೆ ಸಂದರ್ಭದಲ್ಲಿ ಮಾತ್ರವೇ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿಯಲಾಗುತ್ತದೆ. ಇದನ್ನು ಹೊರತುಪಡಿಸಿ, ದೇವಸ್ಥಾನದ ಇತರೆ ಅಭಿವೃದ್ಧಿಗೆ ನಯಾಪೈಸೆಯನ್ನೂ ಸರ್ಕಾರ ನೀಡುತ್ತಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಸರ್ಕಾರ ಈವರೆಗೂ ಹಳೆಯದಾದ ದೇವಾಲಯವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಬೆಂಗಳೂರಿನ ಸಿಂದೆ ಬ್ರದರ್ಸ್ ಕುಟುಂಬವು ದೇವಾಲಯದ ಜೀರ್ಣೋದ್ಧಾರ ಮಾಡಿದೆ. ದೇವಾಲಯದ ಸುತ್ತಲೂ ತಡೆಗೋಡೆ ನಿರ್ಮಿಸಿ, ದೇವಸ್ಥಾನದ ಹೆಬ್ಬಾಗಿಲಿಗೆ ರಾಜಗೋಪುರವನ್ನು ನಿರ್ಮಿಸಿದ್ದಾರೆ.</p>.<p>ದೇವಾಲಯದ ಮುಂದಿನ ಜಾಗದಲ್ಲಿ ಕಲ್ಯಾಣ ನಿರ್ಮಿಸಲು ಸಿಂದೆ ಬ್ರದರ್ಸ್ ಕುಟುಂಬ ನಿರ್ಧರಿಸಿತ್ತು. ಆದರೆ, ಸರಿಯಾದ ಸಹಕಾರ ಸಿಗದ ಕಾರಣ ಇದು ಸಾಕಾರಗೊಂಡಿಲ್ಲ. ಈ ಜಾಗದಲ್ಲಿ ವಾಸವಿದ್ದವರು ಮನೆಗಳನ್ನು ಖಾಲಿ ಮಾಡಿದ್ದಾರೆ. ಕೆಲವರು ಹಿತ್ತಲು ಜಾಗವನ್ನು ತಿಪ್ಪೆ ಮಾಡಿಕೊಂಡಿದ್ದಾರೆ.</p>.<p>ದೇವಾಲಯಕ್ಕೆ ಬರುವ ಭಕ್ತರಿಗಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವು ಸಂದರ್ಭದಲ್ಲಿ ಬಾಗಿಲು ಹಾಕಿರುತ್ತಾರೆ. ದೇವಾಲಯದ ಮುಂಭಾಗ, ಸುತ್ತಲೂ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ಸ್ವಚ್ಛತೆಯಿಲ್ಲವೆಂದು ಗ್ರಾಮಸ್ಥರು ದೂರುತ್ತಾರೆ.</p>.<p>ನಿತ್ಯಾ ಪೂಜಾ ಸಮಿತಿಯವರು ಶ್ರಾವಣ ಶನಿವಾರದ ದಿನಗಳಲ್ಲಿ ಬೆಳಿಗ್ಗೆ ಪ್ರಸಾದ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತಾರೆ. ಜಾತ್ರೆ ಸಂದರ್ಭದಲ್ಲಿ ದೇವರು ಮತ್ತು ತೇರಿನ<br />ಶೃಂಗಾರವನ್ನು ಭಕ್ತರೇ ಮಾಡುತ್ತಾರೆ.ಆದರೆ, ದೇಗುಲದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಇಲ್ಲ<br />ಎನ್ನುವುದು ಭಕ್ತರು ಮತ್ತು ತಾಲ್ಲೂಕಿನ ಜನತೆಯ ಆರೋಪವಾಗಿದೆ.</p>.<p>ಮೂರು ವರ್ಷವಾದರೂ ದುರಸ್ತಿಯಾಗದ ಕಳಶ</p>.<p>ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಎಲ್ಲಾ ಚಟುವಟಿಕೆಗಳು ಭಕ್ತರ ಸಹಕಾರದಿಂದಲೇ ನಡೆಯುತ್ತಿವೆ. ದೇವಸ್ಥಾನದ ತೇರು, ತೇರಿನ ಮನೆ, ದಾಸೋಹ ಭವನವನ್ನೂ ಭಕ್ತರೇ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ, ವಿಶೇಷ ಸಂದರ್ಭ, ಹಬ್ಬ, ಜಾತ್ರೆ ವೇಳೆ ದಾಸೋಹ ಮತ್ತು ಪ್ರಸಾದ ವಿತರಣೆಯು ಭಕ್ತರ ಸಹಕಾರದಿಂದಲೇ ನಡೆಯುತ್ತಿದೆ.</p>.<p>ಅಂದಿನ ಕಾಲದಲ್ಲಿ ನಿರ್ಮಿಸಿದ್ದ ಗರ್ಭಗುಡಿ ಮೇಲೆ ಅಂದು ಪ್ರತಿಷ್ಠಾಪಿಸಿದ್ದ ಕಳಶಕ್ಕೆ ಹಾನಿಯಾಗಿ 3 ವರ್ಷವೇ ಆಗಿದೆ. ಆದರೆ, ಅದನ್ನು ಇನ್ನೂ ಸರಿಪಡಿಸಿಲ್ಲ. ದಾಸೋಹ ಭವನ ಅಭಿವೃದ್ಧಿಯು ಅರ್ಧಕ್ಕೆ ನಿಂತಿದೆ. ತೇರಿನ ಮನೆಯ ಬಾಗಿಲು ಮುರಿದು 3 ವರ್ಷವೇ ಆಗಿದ್ದು, ಇನ್ನೂ ದುರಸ್ತಿಗೊಳಿಸಿಲ್ಲ. ತೇರನ್ನು ಸದ್ಯಕ್ಕೆ ಅದರಲ್ಲೇ ನಿಲ್ಲಿಸಲಾಗುತ್ತಿದೆ.ತೇರಿನ ಮನೆಗೆ ಬಾಗಿಲು ಹಾಕದಿರುವುದರಿಂದ ಕಿಡಿಕೇಡಿಗಳು ತೇರಿಗೆ ಹಾನಿ ಮಾಡಬಹುದು ಎಂದು ಭಕ್ತರು ಆತಂಕವಾಗಿದೆ.</p>.<p>ಗರ್ಭಗುಡಿಯ ಮೇಲಿನ ಕಳಶ ಮುರಿದು, ಭಿನ್ನವಾಗಿದೆ. ಆದರೂ ಅದನ್ನು ಸರಿಪಡಿಸುತ್ತಿಲ್ಲ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>