ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಮಳೆ ಅಬ್ಬರಿಸಿದ್ದು, ಅರ್ಕಾವತಿ, ವೃಷಭಾವತಿ ಹಾಗೂ ಕಣ್ವ ನದಿಗಳಲ್ಲಿ ಪ್ರವಾಹ ಉಂಟಾಗಿದೆ.
ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ನೀರಿನ ಹರಿವಿನಿಂದಾಗಿ ನದಿ ಸುತ್ತಲಿನ ಜಮೀನುಗಳು ಮುಳುಗಡೆ ಆಗಿವೆ. ಕಣ್ವ ನದಿ ಸುತ್ತಲಿನ ಗುಡ್ಡಗಳು ಕುಸಿಯುತ್ತಿವೆ.
ಬಿಡದಿಯ ನಲ್ಲಿಗುಡ್ಡೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿ ಆಗಿದ್ದು, ಕೋಡಿ ನೀರು ರಸ್ತೆಗೆ ಹರಿದಿದೆ.