ವಿಶ್ವ ಕಾರ್ಮಿಕದ ದಿನದ ಅಂಗವಾಗಿ ತಾಲ್ಲೂಕಿನ ತಡಿಕವಾಗಿಲು ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಲ್ಮೆಟ್ ವಿತರಿಸಿ ಮಾತನಾಡಿದ ಅವರು, ‘ಕಟ್ಟಡ ನಿರ್ಮಾಣ ಮಾಡುವಾಗ ಇಟ್ಟಿಗೆ, ಕಲ್ಲು, ಮರಳು, ಸಿಮೆಂಟ್, ಬಾಣಲಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಲೆ ಮೇಲೆ ಎತ್ತಿ ಕೊಡುವ ಕೆಲಸ ಮಾಡಬೇಕಾಗುತ್ತದೆ. ಆಗ ಯಾವುದೇ ಅವಘಡ ಸಂಭವಿಸದಂತೆ ಸುರಕ್ಷಾ ಸಾಧನಗಳನ್ನು ಬಳಸಬೇಕು’ ಎಂದರು.