ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಬಾರಿ ಕಾದು ನೋಡುವ ತಂತ್ರ ಅನುಸರಿಸಿದ್ದು, ಕಡೆಯ ದಿನಗಳಲ್ಲಿ ಬಿ ಫಾರಂ ವಿತರಿಸಿದವು. ಮಂಗಳವಾರ ಯುಗಾದಿ ಹಾಗೂ ಬುಧವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದು, ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿಲ್ಲ. ಹೀಗಾಗಿ ಕಡೆಯ ದಿನದಂದು ಅಭ್ಯರ್ಥಿಗಳು ಮುಗಿಬಿದ್ದರು.