ರೈತರು ನಿಟ್ಟುಸಿರು
ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾಡಾನೆ ದಾಳಿ ತಡೆಗೆ ಆನೆ ಕಾರ್ಯಪಡೆ ರಚನೆಯ ಭರವಸೆ ಕಡೆಗೂ ಬಜೆಟ್ನಲ್ಲಿ ಈಡೇರಿದೆ. ಆನೆಗಳು ಕಾಡು ಬಿಟ್ಟು ನಾಡು ಸೇರದಂತೆ ಬ್ಯಾರಿಕೇಡ್ ನಿರ್ಮಿಸಲು ₹120 ಕೋಟಿ ತೆಗೆದಿರಿಸಲಾಗಿದೆ. ಇವೆರಡರಿಂದಾಗಿ ಈ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ ಸೌಲಭ್ಯ, ಇದೇ ಕೆಲಸವನ್ನು ನೆಚ್ಚಿಕೊಂಡಿದ್ದ ಕುಟುಂಬಗಳ ಮೊಗದಲ್ಲಿ ಕಿರುನಗೆ ತರಿಸಿದೆ. ಅಲ್ಪಸಂಖ್ಯಾತ ಯುವಜನರಿಗೆ ಜಿಲ್ಲೆಯಲ್ಲಿ ಕೌಶಲ ತರಬೇತಿ ಕೇಂದ್ರ ಸ್ಥಾಪನೆ, ಆ ಸಮುದಾಯದವರ ಸ್ವಾವಲಂಬನೆಗೆ ನೆರವಾಗಲಿದೆ.
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಿಸುವ ಹಿಂದಿನ ಸರ್ಕಾರದ ಯೋಜನೆಗೆ, ಕಾಂಗ್ರೆಸ್ ಸರ್ಕಾರ ಸೊಪ್ಪು ಹಾಕಿಲ್ಲ.