ಕಳೆದಎರಡು ವರ್ಷ ಹಿಂದೆ ನಡರದ ಪುರಸಭೆಯ ಚುನಾವಣೆ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಮಾಡಿರುವುದು.
ಅನರ್ಹರಾಗಿರುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈಗ ಪುರಸಭೆ ಅವಧಿ ಮುಕ್ತಾಯವಾಗಿ ಆಡಳಿತ ಅಧಿಕಾರಿ ನೇಮಕವಾಗಿದೆ. ಆದೇಶ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ
ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ
ತಕ್ಕ ಪಾಠ ಕಲಿಸಿದ್ದಾರೆ
ಜೆಡಿಎಸ್ ಚಿಹ್ನೆಯಿಂದ ಗೆದ್ದಿದ್ದ ನಾಲ್ಕು ಪುರಸಭಾ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿಪ್ ಜಾರಿ ಮಾಡಲಾಗಿತ್ತು. ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದು ಪಕ್ಷ ವಿರೋಧಿ ಚಟುವಟಿಕೆ. ಜಿಲ್ಲಾಧಿಕಾರಿ ಅನರ್ಹ ಮಾಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಎ.ಮಂಜುನಾಥ್ ಮಾಜಿ ಶಾಸಕ