<p><strong>ಕನಕಪುರ:</strong> ಬೂದಿಗುಪ್ಪೆ ಗ್ರಾಮದಲ್ಲಿ ಭಾನುವಾರ ಪೊಲೀಸರನ್ನು ಕಂಡು ಹೆದರಿದ ವ್ಯಕ್ತಿಯೊಬ್ಬರು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಹಾರಿ ಸಾವಿಗೀಡಾಗಿದ್ದಾರೆ.</p>.<p>ಬೂದಿಗುಪ್ಪೆ ಕಾಳಯ್ಯ (40) ಮೃತ ವ್ಯಕ್ತಿ. ಅವರಿಗೆ ಈಜು ಬರುತ್ತಿರಲಿಲ್ಲ. ಬೆಂಗಳೂರಿನ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು <br>ಮಕ್ಕಳಿದ್ದಾರೆ. </p>.<p>ಭಾನುವಾರ ರಜೆ ಕಳೆಯಲು ಕಾಳಯ್ಯ ಬರಡನಹಳ್ಳಿ ರಸ್ತೆಯ ಚಿಕ್ಕಹೊಳೆ ದಂಡೆ ಮೇಲೆ ಸ್ನೇಹಿತ<br>ರೊಂದಿಗೆ ಸೇರಿದ್ದರು. ಇದೇ ಮಾರ್ಗವಾಗಿ ಬರಡನಹಳ್ಳಿಗೆ ಹೋಗುತ್ತಿದ್ದ ಪೊಲೀಸರನ್ನು ನೋಡಿದ ಕಾಳಯ್ಯ ಹಾಗೂ ನಾಲ್ವರು ಸ್ನೇಹಿತರು ಅವರಿಂದ ತಪ್ಪಿಸಿಕೊಳ್ಳಲು ಚಿಕ್ಕಹೊಳೆಗೆ ಧುಮಿಕಿದ್ದಾರೆ. </p>.<p>ಕಾಳಯ್ಯ ಅವರಿಗೆ ಈಜಲು ಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಅವರನ್ನು ರಕ್ಷಿಸಿ ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.</p>.<p>ಘಟನೆ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಮತ್ತು ಮಿಥುನ್ ಶಿಲ್ಪಿ ಠಾಣೆಗೆ ಭೇಟಿ <br>ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ಡಿವೈಎಸ್ಪಿ ಗಿರಿ ಕೆ.ಎಸ್ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರ ಮನವೊಲಿಸಲು ಪ್ರಯತ್ನ ಮಾಡಿದರು.</p>.<p>ಈ ಹಿಂದೆ ತಿಗಳರ ಹೊಸಳ್ಳಿ ಗ್ರಾಮದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬರು ಇದೇ ರೀತಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಬೂದಿಗುಪ್ಪೆ ಗ್ರಾಮದಲ್ಲಿ ಭಾನುವಾರ ಪೊಲೀಸರನ್ನು ಕಂಡು ಹೆದರಿದ ವ್ಯಕ್ತಿಯೊಬ್ಬರು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಹಾರಿ ಸಾವಿಗೀಡಾಗಿದ್ದಾರೆ.</p>.<p>ಬೂದಿಗುಪ್ಪೆ ಕಾಳಯ್ಯ (40) ಮೃತ ವ್ಯಕ್ತಿ. ಅವರಿಗೆ ಈಜು ಬರುತ್ತಿರಲಿಲ್ಲ. ಬೆಂಗಳೂರಿನ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು <br>ಮಕ್ಕಳಿದ್ದಾರೆ. </p>.<p>ಭಾನುವಾರ ರಜೆ ಕಳೆಯಲು ಕಾಳಯ್ಯ ಬರಡನಹಳ್ಳಿ ರಸ್ತೆಯ ಚಿಕ್ಕಹೊಳೆ ದಂಡೆ ಮೇಲೆ ಸ್ನೇಹಿತ<br>ರೊಂದಿಗೆ ಸೇರಿದ್ದರು. ಇದೇ ಮಾರ್ಗವಾಗಿ ಬರಡನಹಳ್ಳಿಗೆ ಹೋಗುತ್ತಿದ್ದ ಪೊಲೀಸರನ್ನು ನೋಡಿದ ಕಾಳಯ್ಯ ಹಾಗೂ ನಾಲ್ವರು ಸ್ನೇಹಿತರು ಅವರಿಂದ ತಪ್ಪಿಸಿಕೊಳ್ಳಲು ಚಿಕ್ಕಹೊಳೆಗೆ ಧುಮಿಕಿದ್ದಾರೆ. </p>.<p>ಕಾಳಯ್ಯ ಅವರಿಗೆ ಈಜಲು ಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಅವರನ್ನು ರಕ್ಷಿಸಿ ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.</p>.<p>ಘಟನೆ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p>ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಮತ್ತು ಮಿಥುನ್ ಶಿಲ್ಪಿ ಠಾಣೆಗೆ ಭೇಟಿ <br>ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ಡಿವೈಎಸ್ಪಿ ಗಿರಿ ಕೆ.ಎಸ್ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರ ಮನವೊಲಿಸಲು ಪ್ರಯತ್ನ ಮಾಡಿದರು.</p>.<p>ಈ ಹಿಂದೆ ತಿಗಳರ ಹೊಸಳ್ಳಿ ಗ್ರಾಮದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬರು ಇದೇ ರೀತಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>