ಬಿಡದಿ ಧ್ಯಾನಪೀಠವು ನಿತ್ಯಾನಂದನ ಶಿಷ್ಯರ ಪಾಲಿಗೆ ಸುರಕ್ಷಿತ ಸ್ಥಳವಾಗಿದೆ. ಸುತ್ತಲೂ ಎತ್ತರವಾದ ಕಾಂಪೌಂಡ್ ವ್ಯವಸ್ಥೆ ಇದ್ದು, ಒಳಗಿನ ಚಟುವಟಿಕೆಗಳ ಮಾಹಿತಿ ಹೊರಗೆ ತಲುಪುವುದಿಲ್ಲ. ಆಶ್ರಮವು ತನ್ನದೇ ಆದ ಖಾಸಗಿ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದೆ. ಮಾಧ್ಯಮಗಳಿಗೂ ಪ್ರವೇಶವಿಲ್ಲ. ಪೊಲೀಸರು ಸಹ ಅನುಮತಿ ಪಡೆದೇ ಒಳ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸದ್ಯ ಇದೇ ಪ್ರಶಸ್ತ ಸ್ಥಳ ಎಂದು ಅವರ ಶಿಷ್ಯಂದಿರು ಇಲ್ಲೇ ವಾಸ್ತವ್ಯ ಹೂಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ನಿತ್ಯಾನಂದ ಸ್ವಾಮೀಜಿ ಸುಳಿವು ಪತ್ತೆಯಾಗಿಲ್ಲ.