ಏನಿದರ ಉದ್ದೇಶ: ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಇರುವ ರಾಮನಗರ ಜಿಲ್ಲೆಯು ಪ್ರವಾಸಿ ತಾಣಗಳ ಬೀಡು. ಬೃಹತ್ತಾದ ಏಕಶಿಲಾ ಬೆಟ್ಟಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡುಗಳು, ವಿಶಾಲವಾದ ಕೆರೆ-ಕುಂಟೆಗಳು, ಮಾವು-ರೇಷ್ಮೆ ಸೊಗಡಿನ ಗ್ರಾಮೀಣ ಪರಿಸರ.... ಹೀಗೆ ವೈವಿಧ್ಯಮಯ ತಾಣಗಳು ಇಲ್ಲಿವೆ. ಇದರಲ್ಲಿ ಸಾಕಷ್ಟು ತಾಣಗಳು ಈಗಾಗಲೇ ಪ್ರಸಿದ್ಧಿಯಾಗಿವೆ. ಇವುಗಳನ್ನು ಇನ್ನಷ್ಟು ಪ್ರಚುರಪಡಿಸುವ ಜೊತೆಗೆ ಹೆಚ್ಚು ಬೆಳಕಿಗೆ ಬಾರದ ತಾಣಗಳನ್ನು ಜನರಿಗೆ ಪರಿಚಯಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.