<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿಯಲ್ಲಿ ಹೊಸ ವರ್ಷದ ಅಂಗವಾಗಿ ಸೋಮವಾರ ಕಸಾಪ ತಾಲ್ಲೂಕು ಘಟಕದಿಂದ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮತ್ತೀಕೆರೆ ಬಿ. ಚಲುವರಾಜು ಮಾತನಾಡಿ, ‘ಕಾವ್ಯವನ್ನು ಜನರಿಗೆ ಸರಳ, ಸಂಕ್ಷಿಪ್ತ ಹಾಗೂ ಸಾರ್ವತ್ರಿಕವಾಗಿ ಹೇಳುವ ಕೆಲಸವಾಗಬೇಕು. ಕಾವ್ಯವನ್ನು ಬಚ್ಚಿಡುವುದಕ್ಕಿಂತ ಹೊರ ಜಗತ್ತಿಗೆ ಬಿಚ್ಚಿಡಬೇಕು’ ಎಂದು ಹೇಳಿದರು.</p>.<p>ವಚನಗಳು ಸಾಹಿತ್ಯ ಲೋಕದ ಬಹುಮುಖ್ಯ ಕಾವ್ಯ ಪ್ರಕಾರಗಳಾಗಿವೆ.ಅವುಗಳಲ್ಲಿ ಭಾಷಾ ಪ್ರೌಢಿಮೆ ಸಾರುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಳಕಳಿಯನ್ನು<br />ಜನರದ್ದೇ ಆಡು ಭಾಷೆಯಲ್ಲಿ ತಿಳಿಸುವ ವೈಶಿಷ್ಟ್ಯತೆ ಅಡಗಿದೆ. ವಚನಗಳು ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುತ್ತವೆ. ವ್ಯಾಕರಣ ವಿಶೇಷಣಗಳಿಂದ ದೂರ ಉಳಿದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡ ಕಾವ್ಯ<br />ಪ್ರಕಾರವಾಗಿ ಹೊರ ಹೊಮ್ಮಿವೆ. ಹೀಗಾಗಿ ಇವು ಜನರಿಗೆ ಇಷ್ಟವಾಗುತ್ತವೆ ಎಂದರು.</p>.<p>ಗ್ರಾಮದ ಹಿರಿಯ ಮುಖಂಡ ಕೆ. ತಿಮ್ಮೇಗೌಡ ಮಾತನಾಡಿ, ‘ನಮ್ಮ ಹಳೆಯ ತಲೆಮಾರಿನವರು, ಜನಪದರು ಹಾಡುವ ಗೀತೆಗಳು ಮರೆಯಾಗುತ್ತಿವೆ. ಇಂದಿನ ಗಾಯಕರು ಅವುಗಳನ್ನು ಮತ್ತೆ ಪ್ರಸ್ತುತಪಡಿಸಿ ಜನಮಾನಸದಲ್ಲಿ ಉಳಿಯುವಂತೆ ಪ್ರಚುರ ಪಡಿಸಬೇಕು’ ಎಂದರು.</p>.<p>ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ, ಮತ್ತೀಕೆರೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಎಚ್.ಆರ್. ರಮೇಶ್, ಸಾಹಿತ್ಯ ಪರಿಚಾರಕರಾದ ಚಕ್ಕೆರೆ<br />ಪುಟ್ಟಸ್ವಾಮಿ, ಭಾನುಮತಿ, ದಿವ್ಯ, ಪುಟ್ಟಮ್ಮ, ನಿವೃತ್ತ ಅಧ್ಯಾಪಕ ಸಿ. ಚನ್ನವೀರೇಗೌಡ, ನಿವೃತ್ತ ಶಿಕ್ಷಕ ಸಿ. ಶ್ರೀನಿವಾಸ್ ಭಾಗವಹಿಸಿದ್ದರು.</p>.<p>ಮಂಜೇಶ್ ಬಾಬು, ಎಂ. ಶ್ರೀನಿವಾಸ ಅಬ್ಬೂರು ಕವಿತೆ ವಾಚಿಸಿದರು. ಗಾಯಕರಾದ ಕೆ.ಎಚ್. ಕುಮಾರ್, ಸಿ. ಪ್ರಸನ್ನಕುಮಾರ್, ಬಸವರಾಜು, ಶಿವರಾಜು, ಮುತ್ತುರಾಜು, ಮಿಮಿಕ್ರಿ ಶಂಕರ್ ಬಾಬು ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿಯಲ್ಲಿ ಹೊಸ ವರ್ಷದ ಅಂಗವಾಗಿ ಸೋಮವಾರ ಕಸಾಪ ತಾಲ್ಲೂಕು ಘಟಕದಿಂದ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮತ್ತೀಕೆರೆ ಬಿ. ಚಲುವರಾಜು ಮಾತನಾಡಿ, ‘ಕಾವ್ಯವನ್ನು ಜನರಿಗೆ ಸರಳ, ಸಂಕ್ಷಿಪ್ತ ಹಾಗೂ ಸಾರ್ವತ್ರಿಕವಾಗಿ ಹೇಳುವ ಕೆಲಸವಾಗಬೇಕು. ಕಾವ್ಯವನ್ನು ಬಚ್ಚಿಡುವುದಕ್ಕಿಂತ ಹೊರ ಜಗತ್ತಿಗೆ ಬಿಚ್ಚಿಡಬೇಕು’ ಎಂದು ಹೇಳಿದರು.</p>.<p>ವಚನಗಳು ಸಾಹಿತ್ಯ ಲೋಕದ ಬಹುಮುಖ್ಯ ಕಾವ್ಯ ಪ್ರಕಾರಗಳಾಗಿವೆ.ಅವುಗಳಲ್ಲಿ ಭಾಷಾ ಪ್ರೌಢಿಮೆ ಸಾರುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಳಕಳಿಯನ್ನು<br />ಜನರದ್ದೇ ಆಡು ಭಾಷೆಯಲ್ಲಿ ತಿಳಿಸುವ ವೈಶಿಷ್ಟ್ಯತೆ ಅಡಗಿದೆ. ವಚನಗಳು ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುತ್ತವೆ. ವ್ಯಾಕರಣ ವಿಶೇಷಣಗಳಿಂದ ದೂರ ಉಳಿದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡ ಕಾವ್ಯ<br />ಪ್ರಕಾರವಾಗಿ ಹೊರ ಹೊಮ್ಮಿವೆ. ಹೀಗಾಗಿ ಇವು ಜನರಿಗೆ ಇಷ್ಟವಾಗುತ್ತವೆ ಎಂದರು.</p>.<p>ಗ್ರಾಮದ ಹಿರಿಯ ಮುಖಂಡ ಕೆ. ತಿಮ್ಮೇಗೌಡ ಮಾತನಾಡಿ, ‘ನಮ್ಮ ಹಳೆಯ ತಲೆಮಾರಿನವರು, ಜನಪದರು ಹಾಡುವ ಗೀತೆಗಳು ಮರೆಯಾಗುತ್ತಿವೆ. ಇಂದಿನ ಗಾಯಕರು ಅವುಗಳನ್ನು ಮತ್ತೆ ಪ್ರಸ್ತುತಪಡಿಸಿ ಜನಮಾನಸದಲ್ಲಿ ಉಳಿಯುವಂತೆ ಪ್ರಚುರ ಪಡಿಸಬೇಕು’ ಎಂದರು.</p>.<p>ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ, ಮತ್ತೀಕೆರೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಎಚ್.ಆರ್. ರಮೇಶ್, ಸಾಹಿತ್ಯ ಪರಿಚಾರಕರಾದ ಚಕ್ಕೆರೆ<br />ಪುಟ್ಟಸ್ವಾಮಿ, ಭಾನುಮತಿ, ದಿವ್ಯ, ಪುಟ್ಟಮ್ಮ, ನಿವೃತ್ತ ಅಧ್ಯಾಪಕ ಸಿ. ಚನ್ನವೀರೇಗೌಡ, ನಿವೃತ್ತ ಶಿಕ್ಷಕ ಸಿ. ಶ್ರೀನಿವಾಸ್ ಭಾಗವಹಿಸಿದ್ದರು.</p>.<p>ಮಂಜೇಶ್ ಬಾಬು, ಎಂ. ಶ್ರೀನಿವಾಸ ಅಬ್ಬೂರು ಕವಿತೆ ವಾಚಿಸಿದರು. ಗಾಯಕರಾದ ಕೆ.ಎಚ್. ಕುಮಾರ್, ಸಿ. ಪ್ರಸನ್ನಕುಮಾರ್, ಬಸವರಾಜು, ಶಿವರಾಜು, ಮುತ್ತುರಾಜು, ಮಿಮಿಕ್ರಿ ಶಂಕರ್ ಬಾಬು ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>