ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಎಂ ಕಾರ್ಮಿಕ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ

Last Updated 17 ಏಪ್ರಿಲ್ 2022, 6:49 IST
ಅಕ್ಷರ ಗಾತ್ರ

ಬಿಡದಿ: ‘ಕಾರ್ಮಿಕರ ಜೊತೆಗೆ ಉತ್ತಮ ಸಾಮರಸ್ಯ ಮತ್ತು ಸಾಂಘಿಕ ಕೆಲಸಕ್ಕೆ ಉತ್ತೇಜನ ನೀಡಲಾಗುವುದು’ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರ ತಿಳಿಸಿದರು.

ಕಂಪನಿಯಲ್ಲಿ ನಡೆದ ಟಿಕೆಎಂ ಕಾರ್ಮಿಕ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕರ ಹಿತರಕ್ಷಣೆಗೆ ಕಂಪನಿ ಬದ್ಧವಾಗಿದೆ ಎಂದು ಹೇಳಿದರು.

ಟಿಕೆಎಂ ಕಾರ್ಮಿಕ ಸಂಘದ ನೂತನ ಅಧ್ಯಕ್ಷ ಎಸ್.ಆರ್. ದೀಪಕ್ ಮಾತನಾಡಿ, ಗುರಿ ಈಡೇರಿಸಿಕೊಳ್ಳಲು ಒಂದು ತಂಡವಾಗಿ ಆಡಳಿತ ಮಂಡಳಿ ಹಾಗೂ ಟಿಕೆಎಂ ಕಾರ್ಮಿಕ ಸಂಘ ಕೆಲಸ ಮಾಡಬೇಕಾಗಿದೆ. ಕಾರ್ಮಿಕ ಸಂಘದ ಬೆಂಬಲವನ್ನು ಆಡಳಿತ ಮಂಡಳಿಗೆ ನೀಡಲು ಬದ್ಧ ಎಂದು
ಹೇಳಿದರು.

ಉದ್ಯೋಗಿಗಳು ಮತ್ತು ಕಂಪನಿ ಪರಸ್ಪರ ಅವಲಂಬಿತರಾಗಿದ್ದಾರೆ. ಟಿಕೆಎಂ ನಿಯಮದ ಪ್ರಕಾರ ಪರಸ್ಪರ ಅಭಿಪ್ರಾಯ ಮತ್ತು ಗೌರವಿಸಿ ನಂಬಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT