<p><strong>ಉಯ್ಯಂಬಳ್ಳಿ (ಕನಕಪುರ):</strong> ಜಮೀನಿನಲ್ಲಿ ಮೇಯುತ್ತಿದ್ದ ನಾಟಿ ಹಸುವೊಂದು ಮದ್ದಿನ ಉಂಡೆ (ನಾಡ ಬಾಂಬ್/ನೆಲಬಾಂಬ್) ತಿಂದು ಬಾಯಿ ಛಿದ್ರಗೊಂಡ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.</p>.<p>ಹಸು ಏಳಗಳ್ಳಿ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದೆ. ಪ್ರತಿದಿನದಂತೆ ಗುರುವಾರ ಬೆಳಿಗ್ಗೆ ಶಂಕರೇಗೌಡರು ಹಸುವನ್ನು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ.</p>.<p>ಕಳ್ಳ ಬೇಟೆಗಾರರು ಹಂದಿ ಬೇಟೆಯಾಡಲು ಈ ಮದ್ದಿನ ಉಂಡೆಯನ್ನು ಬಳಸುತ್ತಾರೆ. ನೆಲದಲ್ಲಿ ಹುದುಗಿಸಿ ಇಟ್ಟಿರುವ ಈ ಮದ್ದಿನ ಉಂಡೆಯನ್ನು ಹಂದಿ ಅಥವಾ ಇನ್ನಿತರ ಯಾವುದೆ ಪ್ರಾಣಿಯು ಅದನ್ನು ತಿಂದಾಗ ಅದರ ಬಾಯಿ ಮತ್ತು ಮುಖ ಛಿದ್ರವಾಗುತ್ತದೆ.</p>.<p>ಮದ್ದಿನ ಉಂಡೆಯನ್ನು ತಿಂದ ಹಸುವಿನ ಬಾಯಿ ಛಿದ್ರವಾಗಿದ್ದರೂ ಹಸು ಬದುಕಿದೆ. ಆದರೆ ಹಸುವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ. ಏನೇ ಪ್ರಯತ್ನಪಟ್ಟರು ಮೇವನ್ನು ತಿನ್ನಲಾಗದೆ ಕ್ರಮೇಣ ಹಸು ಸಾವನ್ನಪ್ಪುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.</p>.<p>ಘಟನೆ ಸಂಬಂಧ ಹಸುವಿನ ಮಾಲಿಕ ಶಂಕರೇಗೌಡ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಯ್ಯಂಬಳ್ಳಿ (ಕನಕಪುರ):</strong> ಜಮೀನಿನಲ್ಲಿ ಮೇಯುತ್ತಿದ್ದ ನಾಟಿ ಹಸುವೊಂದು ಮದ್ದಿನ ಉಂಡೆ (ನಾಡ ಬಾಂಬ್/ನೆಲಬಾಂಬ್) ತಿಂದು ಬಾಯಿ ಛಿದ್ರಗೊಂಡ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.</p>.<p>ಹಸು ಏಳಗಳ್ಳಿ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದೆ. ಪ್ರತಿದಿನದಂತೆ ಗುರುವಾರ ಬೆಳಿಗ್ಗೆ ಶಂಕರೇಗೌಡರು ಹಸುವನ್ನು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ.</p>.<p>ಕಳ್ಳ ಬೇಟೆಗಾರರು ಹಂದಿ ಬೇಟೆಯಾಡಲು ಈ ಮದ್ದಿನ ಉಂಡೆಯನ್ನು ಬಳಸುತ್ತಾರೆ. ನೆಲದಲ್ಲಿ ಹುದುಗಿಸಿ ಇಟ್ಟಿರುವ ಈ ಮದ್ದಿನ ಉಂಡೆಯನ್ನು ಹಂದಿ ಅಥವಾ ಇನ್ನಿತರ ಯಾವುದೆ ಪ್ರಾಣಿಯು ಅದನ್ನು ತಿಂದಾಗ ಅದರ ಬಾಯಿ ಮತ್ತು ಮುಖ ಛಿದ್ರವಾಗುತ್ತದೆ.</p>.<p>ಮದ್ದಿನ ಉಂಡೆಯನ್ನು ತಿಂದ ಹಸುವಿನ ಬಾಯಿ ಛಿದ್ರವಾಗಿದ್ದರೂ ಹಸು ಬದುಕಿದೆ. ಆದರೆ ಹಸುವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ. ಏನೇ ಪ್ರಯತ್ನಪಟ್ಟರು ಮೇವನ್ನು ತಿನ್ನಲಾಗದೆ ಕ್ರಮೇಣ ಹಸು ಸಾವನ್ನಪ್ಪುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.</p>.<p>ಘಟನೆ ಸಂಬಂಧ ಹಸುವಿನ ಮಾಲಿಕ ಶಂಕರೇಗೌಡ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>