ಧಾರ್ಮಿಕ ದತ್ತಿ ಇಲಾಖೆ, ದಾಸೋಹ ಮಠ, ಶ್ರೀರೇವಣಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ನಿಂದ ಹಾಗೂ ಸೇವಾ ಗ್ರಾಮಗಳಾದ ಅವ್ವೇರಹಳ್ಳಿ, ನೆಲಮಲೆ, ಕೆ.ಜಿ. ಹೊಸಹಳ್ಳಿ, ಅಮ್ಮನಪುರ, ತೆಂಗಿನಕಲ್ಲು, ದೇವರದೊಡ್ಡಿ, ಕುರುಬಳ್ಳಿದೊಡ್ಡಿ, ಕೋಟಹಳ್ಳಿ, ಪೂಜಾರಿ ದೊಡ್ಡಿ, ಕೆರೆಮೇಗಳದೊಡ್ಡಿ, ಹುಲಿಕೆರೆ, ಗುನ್ನೂರು, ಕಡ್ಲೆ ಸುಬ್ಬಯ್ಯನದೊಡ್ಡಿ, ಸಾಹುಕಾರ್ದೊಡ್ಡಿ, ಸಬ್ಬಕೆರೆ ಗ್ರಾಮಸ್ಥರಿಂದ ಜಾತ್ರಾ ಮಹೋತ್ಸದ ದಿನಗಳಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್ ತಿಳಿಸಿದ್ದಾರೆ.