ಹೀಗೆ ಪರಾರಿ ಆಗಿದ್ದವರು ಮತ್ತೆ ಹೆದ್ದಾರಿಗೆ ವಾಪಸ್ ಆಗುವ ವೇಳೆ ಕುಡಿದ ಮತ್ತಿನಲ್ಲಿ ರೈಲು ಹಳಿ ದಾಟಲು ಮುಂದಾಗಿದ್ದು, ಈ ಸಂದರ್ಭ ರೈಲು ಡಿಕ್ಕಿಯಾಗಿ ದಿಲೀಪ್ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದರು. ಆದರೆ ಪೊಲೀಸರು ಬೆನ್ನು ಹತ್ತಿದ್ದ ವೇಳೆಯೇ ದಿಲೀಪ್ ಪರಾರಿ ಆಗಲು ಯತ್ನಿಸಿ ರೈಲಿಗೆ ಸಿಲುಕಿ ಮೃತಪಟ್ಟರು ಎಂದೂ ಹೇಳಲಾಗುತ್ತಿದೆ.