ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾಲುವೆ ಆವರಿಸಿದ ಕಸ, ಗಿಡಗಂಟಿ: ಮಳೆ ಬಂದರೆ ರಸ್ತೆ ಮೇಲೆ ಹರಿಯುವ ನೀರು

ಮಳೆಗಾಲ ಬಂದರೂ ಸ್ವಚ್ಛತೆಗೆ ಮುಂದಾಗದ ಗ್ರಾಮ ಪಂಚಾಯಿತಿ
ವಿವೇಕ್ ಕುದೂರು
Published : 17 ಜೂನ್ 2024, 6:10 IST
Last Updated : 17 ಜೂನ್ 2024, 6:10 IST
ಫಾಲೋ ಮಾಡಿ
Comments
ಕುದೂರು ಪಟ್ಟಣದ ಶಿವಗಂಗೆ ಮುಖ್ಯ ರಸ್ತೆಯ ರಾಜಕಾಲುವೆಯನ್ನು ಆವರಿಸಿರುವ ಗಿಡಗಂಟಿಗಳು
ಕುದೂರು ಪಟ್ಟಣದ ಶಿವಗಂಗೆ ಮುಖ್ಯ ರಸ್ತೆಯ ರಾಜಕಾಲುವೆಯನ್ನು ಆವರಿಸಿರುವ ಗಿಡಗಂಟಿಗಳು
ಕುದೂರಿನ ಸಂತೆ ಬೀದಿ ರಸ್ತೆ ಬಡಾವಣೆಯ ಚರಂಡಿಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಿರುವುದು
ಕುದೂರಿನ ಸಂತೆ ಬೀದಿ ರಸ್ತೆ ಬಡಾವಣೆಯ ಚರಂಡಿಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಿರುವುದು
ಕುದೂರು ಪಟ್ಟಣದ ಮಾರುತಿನಗರದ ಚರಂಡಿಯ ಸ್ಥಿತಿ
ಕುದೂರು ಪಟ್ಟಣದ ಮಾರುತಿನಗರದ ಚರಂಡಿಯ ಸ್ಥಿತಿ
ಮಾರಪ್ಪನಪಾಳ್ಯ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಚರಂಡಿಗಳಿಗೆ ಕಸ ಸುರಿಯುವುದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಪಂಚಾಯಿತಿಯವರು ಆದಷ್ಟು ಬೇಗ ಚರಂಡಿ ಸ್ವಚ್ಛಗೊಳಿಸಬೇಕು. ಕಸ ಸುರಿಯದಂತೆ ಕ್ರಮ ಕೈಗೊಳ್ಳಬೇಕು
– ಯತಿರಾಜು ಕೆ.ಆರ್ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕುದೂರು
ಪಂಚಾಯಿತಿಯವರು ರಾಜಕಾಲುವೆಗಳ ನಿರ್ವಹಣೆಯನ್ನೇ ಮರೆತಿದ್ದು ಈಗಲಾದರೂ ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕು. ಮಹಾತ್ಮ ನಗರದದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯಾಗಬೇಕಿದೆ
– ನಟರಾಜು ಮಹಾತ್ಮ ನಗರ ನಿವಾಸಿ
ಸ್ಥಳೀಯ ಆಡಳಿತವು ಕಾಲಕಾಲಕ್ಕೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿದರೆ ಮಳೆ ಸುರಿದರೂ ಅನಾಹುತ ಸಂಭವಿಸುವುದಿಲ್ಲ. ರಸ್ತೆ ಸುತ್ತಮುತ್ತ ಕಸ ಸುರಿಯುವುದನ್ನು ಸಾರ್ವಜನಿಕರು ನಿಲ್ಲಿಸಬೇಕಿದೆ. ಪರಿಸರ ಸ್ವಚ್ಛವಾಗಿದ್ದರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗಲಿದೆ
– ಪಾನಿಪುರಿ ಶಂಕರ್ ಸ್ಥಳೀಯ ನಿವಾಸಿ ಕುದೂರು
ಸ್ವಚ್ಛತೆಗೆ ಅಗತ್ಯ ಕ್ರಮ: ಪಿಡಿಒ
‘ಮಳೆಗಾಲದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ರೀತಿಯ ಮಳೆಹಾನಿ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಲವೆಡೆ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗಿದೆ’ ಎಂದು ಕುದೂರು ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT