<p><strong>ರಾಮನಗರ: </strong>ಬೇವೂರು ಗ್ರಾಮದಲ್ಲಿನ ಕುಂಬಾರಿಕೆ ಕಲೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಮಡಿಕೆ–ಕುಡಿಕೆ ತಯಾರಾಗುವ ತಿರುಗು ಮಣೆಗೆ ಸೌರ ವಿದ್ಯುತ್ ಸಂಪರ್ಕ ದೊರೆತಿದ್ದು, ಇದರಿಂದ ಉತ್ಪಾದನೆ ದುಪ್ಪಟ್ಟಾಗಿ ಆದಾಯವೂ ಹೆಚ್ಚಿದೆ.</p>.<p>ಚನ್ನಪಟ್ಟಣ ತಾಲ್ಲೂಕಿನ ಈ ಗ್ರಾಮ ಕುಡಿಕೆ ಬೇವೂರು ಎಂತಲೇ ಪ್ರಸಿದ್ಧಿ. ಇಲ್ಲಿ ತಯಾರಾಗುವ ಮಡಿಕೆಯಾಕಾರದ ಪುಟ್ಟ ಕುಡಿಕೆಗಳಿಗೆ ಜಿಲ್ಲೆ–ಹೊರ ಜಿಲ್ಲೆಯಲ್ಲೂ ಬೇಡಿಕೆ ಇದೆ. ಸುಮಾರು 30 ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಸಿಕೊಂಡಿವೆ. ತಲೆತಲಾಂತರದಿಂದ ಈ ವೃತ್ತಿ ಮಾಡುತ್ತ ಬಂದಿರುವ ಕುಟುಂಬಗಳಿಗೆ ಸೆಲ್ಕೋ ಸೋಲಾರ್ ಲೈಟ್ ಕಂಪನಿ ಸೋಲಾರ್ ಚಾಲಿತ ಮಡಿಕೆ ಮಾಡುವ ಚಕ್ರವನ್ನು ಒದಗಿಸಿದೆ. ಸೌರಶಕ್ತಿಯನ್ನೇ ಬಳಸಿಕೊಂಡು ಈ ಮಣೆ ತಿರುಗುತ್ತಿದ್ದು, ಇದರಿಂದ ಶ್ರಮಿಕರ ಸಮಯದ ಉಳಿತಾಯದ ಜೊತೆಗೆ ಉತ್ಪಾದನೆಯೂ ಹೆಚ್ಚಿದೆ.</p>.<p>ಬೇವೂರಿನ ಏಳು ಮನೆಗಳಲ್ಲಿ ಈಗಾಗಲೇ ಈ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ವಿದ್ಯುತ್ನ ಸಹಾಯವಿಲ್ಲದೆಯೇ ಸೌರಶಕ್ತಿಯಿಂದಲೇ ಇವು ತಿರುಗುತ್ತಿವೆ. ದಿನಕ್ಕೆ 7–8 ಗಂಟೆ ಉಪಯೋಗಿಸಬಹುದಾಗಿದೆ. ಬ್ಯಾಟರಿ, ಇನ್ವರ್ಟರ್ ಸೇರಿದಂತೆ ಇದಕ್ಕೆ ₹70 ಸಾವಿರ ವೆಚ್ಚ ತಲುಪಿದ್ದು, ಇದರಲ್ಲಿನ ಒಂದು ಪಾಲನ್ನು ಸೆಲ್ಕೋ ಹಾಗೂ ಉಳಿದಿದ್ದನ್ನು ಫಲಾನುಭವಿಗಳು ಭರಿಸಿದ್ದಾರೆ.</p>.<p>‘ಈ ಮೊದಲು ಕೈಯಿಂದ ಮಣೆ ತಿರುಗಿಸಿ ಕುಡಿಕೆ ಮಾಡಲು ಸಮಯ ಹಿಡಿಯುತ್ತಿತ್ತು. ದಿನಕ್ಕೆ ಹೆಚ್ಚೆಂದರೆ 700 ಕುಡಿಕೆ ಮಾಡುತ್ತಿದ್ದೆವು. ಸೌರಮಣೆ ಬಂದ ಮೇಲೆ ಉತ್ಪಾದನೆಯು ದಿನಕ್ಕೆ 1,500ಕ್ಕೆ ಏರಿದೆ. ಅದರಂತೆ ನಮ್ಮ ಆದಾಯವೂ ದುಪ್ಪಟ್ಟಾಗಿದೆ’ ಎಂದು ಬೇವೂರಿನ ಕರಕುಶಲಕರ್ಮಿ ರಾಜು ಸಂತಸ ವ್ಯಕ್ತಪಡಿಸಿದರು.</p>.<p>ಸೌರಶಕ್ತಿಯಿಂದ ಶುದ್ಧ ನೀರು ಘಟಕ: ರಾಮನಗರ ತಾಲ್ಲೂಕಿನ ಚೌಡೇಶ್ವರಿಪುರದಲ್ಲಿ ಸೆಲ್ಕೋದಿಂದ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುವ 500 ಲೀಟರ್ ಸಾಮರ್ಥ್ಯದ ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ. ನೂರು ಕುಟುಂಬಗಳ ಪುಟ್ಟ ಗ್ರಾಮಕ್ಕೆ ಬೇಕಾಗುವಷ್ಟು ಶುದ್ಧ ನೀರನ್ನು ಈ ಘಟಕವೇ ಪೂರೈಸುತ್ತಿದೆ. ವಿದ್ಯುತ್ ಕಡಿತಗೊಂಡರೂ ಇಲ್ಲಿ ನೀರು ಪೂರೈಕೆ ನಿಲ್ಲುವುದಿಲ್ಲ.</p>.<p>ಈ ಘಟಕ ನಿರ್ಮಾಣಕ್ಕಾಗಿ ಸೆಲ್ಕೋ ಒಟ್ಟು ₹8.5 ಲಕ್ಷ ವ್ಯಯಿಸಿದೆ. ಸಂಪೂರ್ಣ ಸೌರಚಾಲಿತ ಎನ್ನುವುದು ಇದರ ವಿಶೇಷ. ಇದರಿಂದ ವಿದ್ಯುತ್ ಬಿಲ್ ತಪ್ಪಿದೆ. ನೀರಿನ ಬಿಲ್ನಿಂದ ಸಂಗ್ರಹವಾಗುವ ಹಣವು ಯಂತ್ರ ನಿರ್ವಹಣೆ ಜೊತೆಗೆ ಒಬ್ಬ ಮಹಿಳೆಗೆ ಉದ್ಯೋಗವನ್ನೂ ನೀಡಿದೆ. ಈಗ ಇರುವ ಘಟಕಗಳನ್ನೂ ಸೌರಶಕ್ತಿಗೆ ಬದಲಿಸಿಕೊಳ್ಳಲು ₹3.5 ಲಕ್ಷ ಸಾಕು. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ 40 ಶುದ್ಧ ಗಂಗಾ ಘಟಕಗಳನ್ನು ಈಗಾಗಲೇ ಸ್ಥಾಪಿಸಿದ್ದೇವೆ ಎಂದು ಸೆಲ್ಕೋ ಕಂಪನಿಯ ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಬೇವೂರು ಗ್ರಾಮದಲ್ಲಿನ ಕುಂಬಾರಿಕೆ ಕಲೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಮಡಿಕೆ–ಕುಡಿಕೆ ತಯಾರಾಗುವ ತಿರುಗು ಮಣೆಗೆ ಸೌರ ವಿದ್ಯುತ್ ಸಂಪರ್ಕ ದೊರೆತಿದ್ದು, ಇದರಿಂದ ಉತ್ಪಾದನೆ ದುಪ್ಪಟ್ಟಾಗಿ ಆದಾಯವೂ ಹೆಚ್ಚಿದೆ.</p>.<p>ಚನ್ನಪಟ್ಟಣ ತಾಲ್ಲೂಕಿನ ಈ ಗ್ರಾಮ ಕುಡಿಕೆ ಬೇವೂರು ಎಂತಲೇ ಪ್ರಸಿದ್ಧಿ. ಇಲ್ಲಿ ತಯಾರಾಗುವ ಮಡಿಕೆಯಾಕಾರದ ಪುಟ್ಟ ಕುಡಿಕೆಗಳಿಗೆ ಜಿಲ್ಲೆ–ಹೊರ ಜಿಲ್ಲೆಯಲ್ಲೂ ಬೇಡಿಕೆ ಇದೆ. ಸುಮಾರು 30 ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಸಿಕೊಂಡಿವೆ. ತಲೆತಲಾಂತರದಿಂದ ಈ ವೃತ್ತಿ ಮಾಡುತ್ತ ಬಂದಿರುವ ಕುಟುಂಬಗಳಿಗೆ ಸೆಲ್ಕೋ ಸೋಲಾರ್ ಲೈಟ್ ಕಂಪನಿ ಸೋಲಾರ್ ಚಾಲಿತ ಮಡಿಕೆ ಮಾಡುವ ಚಕ್ರವನ್ನು ಒದಗಿಸಿದೆ. ಸೌರಶಕ್ತಿಯನ್ನೇ ಬಳಸಿಕೊಂಡು ಈ ಮಣೆ ತಿರುಗುತ್ತಿದ್ದು, ಇದರಿಂದ ಶ್ರಮಿಕರ ಸಮಯದ ಉಳಿತಾಯದ ಜೊತೆಗೆ ಉತ್ಪಾದನೆಯೂ ಹೆಚ್ಚಿದೆ.</p>.<p>ಬೇವೂರಿನ ಏಳು ಮನೆಗಳಲ್ಲಿ ಈಗಾಗಲೇ ಈ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ವಿದ್ಯುತ್ನ ಸಹಾಯವಿಲ್ಲದೆಯೇ ಸೌರಶಕ್ತಿಯಿಂದಲೇ ಇವು ತಿರುಗುತ್ತಿವೆ. ದಿನಕ್ಕೆ 7–8 ಗಂಟೆ ಉಪಯೋಗಿಸಬಹುದಾಗಿದೆ. ಬ್ಯಾಟರಿ, ಇನ್ವರ್ಟರ್ ಸೇರಿದಂತೆ ಇದಕ್ಕೆ ₹70 ಸಾವಿರ ವೆಚ್ಚ ತಲುಪಿದ್ದು, ಇದರಲ್ಲಿನ ಒಂದು ಪಾಲನ್ನು ಸೆಲ್ಕೋ ಹಾಗೂ ಉಳಿದಿದ್ದನ್ನು ಫಲಾನುಭವಿಗಳು ಭರಿಸಿದ್ದಾರೆ.</p>.<p>‘ಈ ಮೊದಲು ಕೈಯಿಂದ ಮಣೆ ತಿರುಗಿಸಿ ಕುಡಿಕೆ ಮಾಡಲು ಸಮಯ ಹಿಡಿಯುತ್ತಿತ್ತು. ದಿನಕ್ಕೆ ಹೆಚ್ಚೆಂದರೆ 700 ಕುಡಿಕೆ ಮಾಡುತ್ತಿದ್ದೆವು. ಸೌರಮಣೆ ಬಂದ ಮೇಲೆ ಉತ್ಪಾದನೆಯು ದಿನಕ್ಕೆ 1,500ಕ್ಕೆ ಏರಿದೆ. ಅದರಂತೆ ನಮ್ಮ ಆದಾಯವೂ ದುಪ್ಪಟ್ಟಾಗಿದೆ’ ಎಂದು ಬೇವೂರಿನ ಕರಕುಶಲಕರ್ಮಿ ರಾಜು ಸಂತಸ ವ್ಯಕ್ತಪಡಿಸಿದರು.</p>.<p>ಸೌರಶಕ್ತಿಯಿಂದ ಶುದ್ಧ ನೀರು ಘಟಕ: ರಾಮನಗರ ತಾಲ್ಲೂಕಿನ ಚೌಡೇಶ್ವರಿಪುರದಲ್ಲಿ ಸೆಲ್ಕೋದಿಂದ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುವ 500 ಲೀಟರ್ ಸಾಮರ್ಥ್ಯದ ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ. ನೂರು ಕುಟುಂಬಗಳ ಪುಟ್ಟ ಗ್ರಾಮಕ್ಕೆ ಬೇಕಾಗುವಷ್ಟು ಶುದ್ಧ ನೀರನ್ನು ಈ ಘಟಕವೇ ಪೂರೈಸುತ್ತಿದೆ. ವಿದ್ಯುತ್ ಕಡಿತಗೊಂಡರೂ ಇಲ್ಲಿ ನೀರು ಪೂರೈಕೆ ನಿಲ್ಲುವುದಿಲ್ಲ.</p>.<p>ಈ ಘಟಕ ನಿರ್ಮಾಣಕ್ಕಾಗಿ ಸೆಲ್ಕೋ ಒಟ್ಟು ₹8.5 ಲಕ್ಷ ವ್ಯಯಿಸಿದೆ. ಸಂಪೂರ್ಣ ಸೌರಚಾಲಿತ ಎನ್ನುವುದು ಇದರ ವಿಶೇಷ. ಇದರಿಂದ ವಿದ್ಯುತ್ ಬಿಲ್ ತಪ್ಪಿದೆ. ನೀರಿನ ಬಿಲ್ನಿಂದ ಸಂಗ್ರಹವಾಗುವ ಹಣವು ಯಂತ್ರ ನಿರ್ವಹಣೆ ಜೊತೆಗೆ ಒಬ್ಬ ಮಹಿಳೆಗೆ ಉದ್ಯೋಗವನ್ನೂ ನೀಡಿದೆ. ಈಗ ಇರುವ ಘಟಕಗಳನ್ನೂ ಸೌರಶಕ್ತಿಗೆ ಬದಲಿಸಿಕೊಳ್ಳಲು ₹3.5 ಲಕ್ಷ ಸಾಕು. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ 40 ಶುದ್ಧ ಗಂಗಾ ಘಟಕಗಳನ್ನು ಈಗಾಗಲೇ ಸ್ಥಾಪಿಸಿದ್ದೇವೆ ಎಂದು ಸೆಲ್ಕೋ ಕಂಪನಿಯ ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>