ಕನಕಪುರ: ಕನ್ನಡ ಸಾಹಿತ್ಯ ಮತ್ತು ನಾಡಿನ ಸಂಸ್ಕೃತಿಯನ್ನು ಒಳಗೊಂಡಿರುವುದೇ ಕನ್ನಡ ಭಾಷೆಯಾಗಿದೆ. ಸಾಹಿತ್ಯ ಸಾಂತ್ವನ ನೀಡಿದಾಗ ಭಾಷೆ ಗೆಲ್ಲುತ್ತದೆ ಎಂದು ಪ್ರಾಧ್ಯಾಪಕ ಡಾ.ರಘುನಂದನ್ ಬೇಗೂರು ತಿಳಿಸಿದರು.
ಇಲ್ಲಿನ ರೂರಲ್ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವಿಚಾರ ವೇದಿಕೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಎಂ. ಗೋವಿಂದಪ್ಪ ಮಾತನಾಡಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿ.ಎನ್. ಮಂಜುನಾಥ್, ಆರ್ಇಎಸ್ ಅಧ್ಯಕ್ಷ ಸಿ. ರಮೇಶ್, ಉಪನ್ಯಾಸಕರಾದ ಶಿವನಾಯ್ಕ್, ಆರ್.ಕೆ. ನಂಜುಂಡಸ್ವಾಮಿ, ವಿನೋದ್, ನಂದಿನಿ, ಜ್ಯೋತಿ, ಪವಿತ್ರಾ, ಭಾಗ್ಯಾ, ತೇಜಸ್ವಿನಿ ಉಪಸ್ಥಿತರಿದ್ದರು.