ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರೆಯು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರದ್ದಾಗಿದೆ. ಆದರೆ, ಸಾಂಪ್ರದಾಯಿಕವಾಗಿ ಪೂಜಾಧಿಗಳು ನಡೆಯಬೇಕು ಎಂಬ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ದೇವಾಲಯದ ಪೌಳಿಯ ಒಳಗೆ ಸೂರ್ಯಮಂಡಲೋತ್ಸವ ನಡೆಯಿತು ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಸಪ್ತಾಶ್ವಗಳ ಮೇಲೆ ರಥಕ ಅರುಣ, ಅರುಣದೇವನ ಮೇಲೆ ಸೂರ್ಯದೇವರ ಪ್ರಭಾವಳಿ, ಪ್ರಭಾವಳಿಯ ಒಳಗೆ ಉಭಯ ಅಮ್ಮನವರ ಸಹಿತ ರಂಗನಾಥಸ್ವಾಮಿ, ಮುತ್ತಿನ ಮಣಿಗಳ ಅಲಂಕಾರ ನೋಡುಗರಲ್ಲಿ ಭಕ್ತಿಯ ಪರವಶತೆ ಮೂಡಿಸುವಂತಿತ್ತು.
ಶೇಷವಾಹನ ಉತ್ಸವ: ರಂಗನಾಥಸ್ವಾಮಿ ಶೇಷವಾಹನ ಉತ್ಸವ ಸಂಜೆ ನಡೆಯಿತು. ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಸಾಂಕೇತಿಕವಾಗಿ ಉತ್ಸವ ನಡೆಸಿದರು.ತಿರುವೆಂಗಳನಾಥ ರಂಗನಾಥ ಸ್ವಾಮಿ ಮತ್ತು ಉಭಯ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿಆದಿಶೇಷನ ಆಭರಣ ತೊಡಿಸಲಾಗಿತ್ತು. ಪುಳಿಯೊಗರೆ, ಪಾನಕ ವಿತರಿಸಲಾಯಿತು. ಶೇಷವಾಹನ ಉತ್ಸವ ದೇಗುಲದ ಪೌಳಿಯ ಒಳಗೆ ನಡೆಯಿತು.