ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಎ ದರ್ಜೆಯ ದೇಗುಲಗಳಲಿಲ್ಲ ದರ್ಶನ

Last Updated 8 ಜೂನ್ 2020, 6:30 IST
ಅಕ್ಷರ ಗಾತ್ರ

ರಾಮನಗರ:ಸರ್ಕಾರದ ಆದೇಶದ ನಡುವೆಯೂ ಜಿಲ್ಲೆಯಲ್ಲಿನ ಎ ದರ್ಜೆಯ ದೇಗುಲಗಳು ಸೋಮವಾರ ಬಾಗಿಲು ತೆರೆದಿಲ್ಲ. ಬಿ ಹಾಗೂ ಸಿ ದರ್ಜೆಯ ದೇಗುಲಗಳಲ್ಲಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಕಬ್ಬಾಳು, ಕೆಂಗಲ್ ಆಂಜನೇಯ, ಮಾಗಡಿ ರಂಗನಾಥಸ್ವಾಮಿ, ಚನ್ನಪಟ್ಟಣದ ಅಪ್ರಮೇಯಸ್ವಾಮಿ ಸೇರಿದಂತೆ ಪ್ರಮುಖ ದೇಗುಲಗಳ ಬಾಗಿಲು ಮುಚ್ಚಿವೆ. ಈ ದೇವಾಲಯಗಳ ಆರಂಭಕ್ಕೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ.

ಸರ್ಕಾರದ ಆದೇಶ ನೋಡಿಕೊಂಡು, ಉಳಿದ ದೇಗುಲಗಳಲ್ಲಿ ಭಕ್ತರ ಪ್ರತಿಕ್ರಿಯೆ ಆಧರಿಸಿ ಅನುಮತಿ ಬಗ್ಗೆ ನಿರ್ಧರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 865 ದೇವಾಲಯಗಳಿವೆ. ಅದರಲ್ಲಿ 7 ಎ ದರ್ಜೆ, 3 ಬಿ ದರ್ಜೆ ಹಾಗು ಉಳಿದ 855 ದೇಗುಲಗಳು ಸಿ ದರ್ಜೆಗೆ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT