<p><strong>ಹಾರೋಹಳ್ಳಿ</strong>: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮ ಮರಳವಾಡಿ ಕೋಟೆ ಗಣಪತಿ ದೇವಸ್ಥಾನದ ಶಂಕರ ಧ್ಯಾನಮಂದಿರ ಆವರಣದಲ್ಲಿ ನಡೆಯಿತು.</p>.<p>ಶಾಮನೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮರಳವಾಡಿ ಹೋಬಳಿ ವೀರಶೈವ, ಲಿಂಗಾಯಿತ ಸಮಾಜದ ಹಿರಿಯ ಗಣ್ಯರಿಗೆ ಗೌರವ ಸಮರ್ಪಣೆ ಇದೇ ವೇಳೆ ನಡೆಯಿತು.</p>.<p>ದಾವಣಗೆರೆಯನ್ನು ವಿಶ್ವದ ಭೂಪಟದಲ್ಲಿ ಗುರ್ತಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ ಎಂದು ಮರಳವಾಡಿ ಶಿವಮಠದ ಕಿರಿಯ ಸ್ವಾಮೀಜಿ ಪ್ರಭುಕಿರೀಟಿ ಹೇಳಿದರು. </p>.<p>ದಾವಣಗೆರೆಯನ್ನು ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯಾಗಿ ಸಮೃದ್ಧಗೊಳಿಸಿದವರು ಶಾಮನೂರು ಶಿವಶಂಕರಪ್ಪ ಎಂದು ಕನಕಪುರ ಮಹಾಸಭಾ ಅಧ್ಯಕ್ಷ ಎಂ.ಉಮಾಶಂಕರ್ ಹೇಳಿದರು.</p>.<p>ಸತತ ಮೂರು ಅವಧಿಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಯಾರಿಗೂ ಅಂಜದೆ, ಅಳುಕದೆ ಸಮಾಜದ ಹಿತ ಕಾಯುವ ವಿಚಾರದಲ್ಲಿ ನಿಷ್ಠುರವಾಗಿ ಮಾತನಾಡುತ್ತಿದ್ದವರು ಶಾಮನೂರು ಎಂದು ಆನೆಕಲ್ ತಾಲೂಕು ವೀರಶೈವ ಸಾಮಾಜದ ಅಧ್ಯಕ್ಷ ಹಿನ್ನಕ್ಕಿ ಜಯಣ್ಣ ಸ್ಮರಿಸಿದರು.</p>.<p>ಮರಳವಾಡಿ ಹೋಬಳಿ ವೀರಶೈವ ಸಮಾಜದ ಹಿರಿಯರಾದ ಮಹದೇವಯ್ಯ, ಮುಚ್ಚಂದಯ್ಯ, ಬಸವರಾಜು, ಪಟೇಲ್.ಕೆ.ವಿ.ಶಿವರುದ್ರಯ್ಯ, ತೇರುಬೀದಿ ರೇಣುಕಪ್ಪ ಸೇರಿದಂತೆ ಹಲವರಿಗೆ ಗೌರವ ಸಮರ್ಪಣೆ ನೆರವೇರಿತು.</p>.<p>ಕೃಷ್ಣಗಿರಿ ಜಿಲ್ಲೆ ವೀರಶೈವ ಮಹಾವೇದಿಕೆ ಅಧ್ಯಕ್ಷ ಸಿ.ಎಂ.ಗೌಡ, ದೇಗುಲಮಠದ ಶ್ರೀನಿರ್ವಾಣ ಸ್ವಾಮಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಪರಮೇಶಯ್ಯ, ಮರಳವಾಡಿ ಹೋಬಳಿ ಮಹಾಸಭಾದ ನಿರ್ದೇಶಕ ಎಂ.ಪಿ.ರುದ್ರೇಶ್ ಕುಮಾರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ</strong>: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮ ಮರಳವಾಡಿ ಕೋಟೆ ಗಣಪತಿ ದೇವಸ್ಥಾನದ ಶಂಕರ ಧ್ಯಾನಮಂದಿರ ಆವರಣದಲ್ಲಿ ನಡೆಯಿತು.</p>.<p>ಶಾಮನೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮರಳವಾಡಿ ಹೋಬಳಿ ವೀರಶೈವ, ಲಿಂಗಾಯಿತ ಸಮಾಜದ ಹಿರಿಯ ಗಣ್ಯರಿಗೆ ಗೌರವ ಸಮರ್ಪಣೆ ಇದೇ ವೇಳೆ ನಡೆಯಿತು.</p>.<p>ದಾವಣಗೆರೆಯನ್ನು ವಿಶ್ವದ ಭೂಪಟದಲ್ಲಿ ಗುರ್ತಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ ಎಂದು ಮರಳವಾಡಿ ಶಿವಮಠದ ಕಿರಿಯ ಸ್ವಾಮೀಜಿ ಪ್ರಭುಕಿರೀಟಿ ಹೇಳಿದರು. </p>.<p>ದಾವಣಗೆರೆಯನ್ನು ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯಾಗಿ ಸಮೃದ್ಧಗೊಳಿಸಿದವರು ಶಾಮನೂರು ಶಿವಶಂಕರಪ್ಪ ಎಂದು ಕನಕಪುರ ಮಹಾಸಭಾ ಅಧ್ಯಕ್ಷ ಎಂ.ಉಮಾಶಂಕರ್ ಹೇಳಿದರು.</p>.<p>ಸತತ ಮೂರು ಅವಧಿಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಯಾರಿಗೂ ಅಂಜದೆ, ಅಳುಕದೆ ಸಮಾಜದ ಹಿತ ಕಾಯುವ ವಿಚಾರದಲ್ಲಿ ನಿಷ್ಠುರವಾಗಿ ಮಾತನಾಡುತ್ತಿದ್ದವರು ಶಾಮನೂರು ಎಂದು ಆನೆಕಲ್ ತಾಲೂಕು ವೀರಶೈವ ಸಾಮಾಜದ ಅಧ್ಯಕ್ಷ ಹಿನ್ನಕ್ಕಿ ಜಯಣ್ಣ ಸ್ಮರಿಸಿದರು.</p>.<p>ಮರಳವಾಡಿ ಹೋಬಳಿ ವೀರಶೈವ ಸಮಾಜದ ಹಿರಿಯರಾದ ಮಹದೇವಯ್ಯ, ಮುಚ್ಚಂದಯ್ಯ, ಬಸವರಾಜು, ಪಟೇಲ್.ಕೆ.ವಿ.ಶಿವರುದ್ರಯ್ಯ, ತೇರುಬೀದಿ ರೇಣುಕಪ್ಪ ಸೇರಿದಂತೆ ಹಲವರಿಗೆ ಗೌರವ ಸಮರ್ಪಣೆ ನೆರವೇರಿತು.</p>.<p>ಕೃಷ್ಣಗಿರಿ ಜಿಲ್ಲೆ ವೀರಶೈವ ಮಹಾವೇದಿಕೆ ಅಧ್ಯಕ್ಷ ಸಿ.ಎಂ.ಗೌಡ, ದೇಗುಲಮಠದ ಶ್ರೀನಿರ್ವಾಣ ಸ್ವಾಮಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಪರಮೇಶಯ್ಯ, ಮರಳವಾಡಿ ಹೋಬಳಿ ಮಹಾಸಭಾದ ನಿರ್ದೇಶಕ ಎಂ.ಪಿ.ರುದ್ರೇಶ್ ಕುಮಾರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>