ಹಾರೋಹಳ್ಳಿ (ಕನಕಪುರ): ಸಮಾಜದಲ್ಲಿ ಗಂಡು – ಹೆಣ್ಣು ಎಂಬ ಬೇಧ ಭಾವ ಸಲ್ಲದು ಎಂದು ಪ್ಯಾರಾ ಅಥ್ಲೆಟಿಕ್ ಸ್ಪರ್ಧಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅಭಿಪ್ರಾಯಪಟ್ಟರು.
ಇಲ್ಲಿನ ಹಾರೋಹಳ್ಳಿ ಹೋಬಳಿ ಮೇಡಮಾರನಹಳ್ಳಿ ಬಳಿಯಿರುವ ಗ್ರೀನ್ ಬೆಲ್ ಹೈಶಾಲೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಹಿಳಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ 'ಉಡಾನ್' ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾರು ಅಶಕ್ತರೆಂದು ಭಾವಿಸಕೂಡದು. ಸಿಗುವ ಅವಕಾಶ ಸಮರ್ಥವಾಗಿ ನಿಭಾಯಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಜೆ.ಉಮಾದೇವಿ ಮಾತನಾಡಿ, ದೇಶದಲ್ಲಿ ಮಹಿಳೆಗೆ ಕೊಟ್ಟಿರುವಷ್ಟು ಸ್ವಾತಂತ್ರ್ಯ ಮತ್ತು ಸ್ಥಾನಮಾನ ಯಾವ ದೇಶವೂ ಕೊಟ್ಟಿಲ್ಲ ಎಂದು ಅಭಿಪ್ರಾಯಪಟ್ಟರು.
ಅನಾದಿ ಕಾಲದಿಂದ ಇಲ್ಲಿಯವರೆಗೂ ಮಹಿಳೆ ಮುಂಚೂಣಿ ಸ್ಥಾನದಲ್ಲಿದ್ದಾರೆ. ಸಮಾಜ ಕಟ್ಟುವ, ಕುಟುಂಬ ಮುನ್ನೆಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಅಂಜುಂ, ನಿರ್ದೇಶಕ ಅಯೂಬ್ಖಾನ್, ಉಪ ನಿರ್ದೇಶಕ ಸೈಪುಲ್ಲಾ ವಸಿಂ ಖಾನ್ ಇದ್ದರು.