ಯೋಗೀಶ್ ತಂಡದಿಂದ ಟಿ.ಕೆ. ಯೋಗೀಶ್, ಸಿಂ.ಲಿಂ. ನಾಗರಾಜು, ಎಸ್.ಟಿ. ನಾರಾಯಣಗೌಡ, ಆರ್. ರಂಗಸ್ವಾಮಿ, ಎನ್.ಎಂ. ಶಂಭೂಗೌಡ, ಸಿ. ಚನ್ನಪ್ಪ, ಟಿ.ಪಿ. ಹನುಮಂತಯ್ಯ, ಕೆಂಚೇಗೌಡ, ಎಸ್. ಮಹೇಶ್ವರ್, ಎಸ್. ಉಮಾಶಂಕರ್ ಆಯ್ಕೆಯಾದರು. ಸಮಾನ ಮನಸ್ಕರ ತಂಡದ ವಿ.ಬಿ. ಚಂದ್ರಯ್ಯ, ವೆಂಕಟರಾಮೇಗೌಡ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಎ.ಎಂ. ಅನಂತಮೂರ್ತಿ, ಮೆಹರೀಶ್, ಮಹಿಳಾ ಅಭ್ಯರ್ಥಿ ಎಂ.ಎ. ಮಾಲಿನಿ ಆಯ್ಕೆಯಾಗಿದ್ದಾರೆ. ಭಾನುವಾರ ಬೆಳಿಗ್ಗೆ ಚುನಾವಣೆ ನಡೆದು ಸಂಜೆ ವೇಳೆಗೆ ಎಣಿಕೆ ಕಾರ್ಯ ನಡೆಯಿತು. ರಾತ್ರಿ 10 ಗಂಟೆ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 47 ಮಂದಿ ಕಣದಲ್ಲಿದ್ದರು. ಸಂಸ್ಥೆಯಲ್ಲಿ ಒಟ್ಟು 3,800 ಮಂದಿ ಮತದಾರರಿದ್ದು, ಅವರಲ್ಲಿ ಒಟ್ಟು 2,884 ಮಂದಿ ತಮ್ಮ ಹಕ್ಕು ಚಲಾಯಿಸಿದರು.