ಸರ್ಕಾರ ಹಿರಿಯ ನಾಗರಿಕರಿಗೆ ಕೊಡುವ ಮಾಸಾಶನ ಪಡೆದಿಲ್ಲವೇಕೆ? ಎಂದರೆ ‘ನಮ್ಮಂತಹ ಬಡವರಿಗೆ ಕೂಲಿ ಕೆಲಸ ಬಿಟ್ಟರೆ ದೇವರೇ ಗತಿ ಸ್ವಾಮಿ , ಮಾಸಾಶನ ಅಂದರೆ ಏನು ಸ್ವಾಮಿ ನಮಗ್ಯಾಕೆ ಬೇರೆಯವರ ಋಣದ ಹಂಗು’ ಎನ್ನುತ್ತಾರೆ. ನೂರು ವರ್ಷ ಕಳೆದಿದ್ದರೂ ಕಣ್ಣು, ಕಿವಿ ಚೆನ್ನಾಗಿ ಕೆಲಸ ಮಾಡುತ್ತಿವೆ. ಪರಂಗಿ ಚಿಕ್ಕನಪಾಳ್ಯದಲ್ಲಿ ಕಡು ಬಡವರಾದ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ.
ಹರಕಲು ಮುರುಕಲು ಮಂಗಳೂರು ಹೆಂಚಿನ ಮನೆಯಲ್ಲಿ ನೂರಾರು ಕಡುಬಡವರ ಕುಟುಂಬಗಳು ಜೀವಿಸುತ್ತಿವೆ.