ನಗರಸಭೆಯ ಮಾಜಿ ಅಧ್ಯಕ್ಷ ಅಮೀರ್ ಖಾನ್ ಮಗ ಖಲಿದ್ ಖಾನ್ ಅವರಿಗೆ ಸೇರಿದ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಅದರಲ್ಲಿದ್ದ ಖಾಲಿ ರಟ್ಟಿನ ಬಾಕ್ಸ್, ಬಿಳಿ ಕಾಗದ ಸೇರಿದಂತೆ ಕೈಗಾರಿಕೆಗಳಿಂದ ತಂದಿದ್ದ ತ್ಯಾಜ್ಯವಸ್ತುಗಳಿಗೆ ಬೆಂಕಿ ತಗುಲಿದೆ. ಮಧ್ಯಾಹ್ನದ ವೇಳೆಗೆ ಗೋದಾಮಿನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಾರ್ಥನೆಗೆಂದು ಹೋದಾಗ ವಿಚಾರ ಗೊತ್ತಾಯಿತು, ಗೋದಾಮಿಗೆ ಯಾವ ರೀತಿ ಬೆಂಕಿ ಬಿದ್ದಿದೆ ಎಂದು ಗೊತ್ತಾಗಿಲ್ಲ, ಕೈಗಾರಿಕೆಗಳಿಂದ ಬರುವ ಕಚ್ಚಾವಸ್ತುಗಳನ್ನು ಸಂಗ್ರಹಿಸಿ ಮತ್ತೆ ಮರುಬಳಕೆಗೆ ಕಂಪೆನಿಗಳಿಗೆ ಕಳಿಸಿಕೊಡುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.