<p>ಮಾಗಡಿ: ಇಲ್ಲಿನ ತಿರುಮಲ ರಂಗನಾಥಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನಡೆಯಿತು. ಮುಜರಾಯಿ ಅಧಿಕಾರಿ ನಿರಂಜನಬಾಬು ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ನಂತರ, ಭಕ್ತರು ಗೋವಿಂದಾ, ಗೋವಿಂದಾ ಎಂದು ನಾಮಸ್ಮರಣೆಯ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. <br /> <br /> ಪುಷ್ಪಾಲಂಕೃತವಾದ ರಥದ ಮೇಲೆ ಶ್ರೀದೇವಿ, ಭೂದೇವಿ ಸಹಿತ ರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ಇಡಲಾಗಿತ್ತು. <br /> <br /> ಕಾಕತಾಳೀಯ ಎಂಬಂತೆ ರಥೋತ್ಸವಕ್ಕೆ ಚಾಲನೆ ನೀಡಿದ ತಕ್ಷಣ ಆಕಾಶದಲ್ಲಿ ಗರುಡ ಪಕ್ಷಿ ರಥದ ಮೇಲೆ ಮೂರು ಸುತ್ತು ಹಾಕಿ ಕಣ್ಮರೆಯಾಯಿತು. ಬಾಳೆಹಣ್ಣಿಗೆ ದವನ ಸಿಕ್ಕಿಸಿ ಭಕ್ತರು ರಥಕ್ಕೆ ಎಸೆದರು.<br /> <br /> ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಮಾಜ ಸೇವಕ ಕೆ.ಬಾಗೇಗೌಡ, ಪುರಸಭಾಧ್ಯಕ್ಷ ಪುರುಷೋತ್ತಮ, ಜಿ.ಪಂ. ಸದಸ್ಯ ಮುದ್ದುರಾಜ್ಯಾದವ್, ಶ್ರೀರಂಗ ಸೇವಾಟ್ರಸ್ಟ್ನ ಅಧ್ಯಕ್ಷ ಟಿ.ಎಸ್. ಸತೀಶ್, ಶ್ರೀರಂಗಾಚಾರ್, ಕಲಾವಿದ ಎಚ್.ಆರ್.ಬ್ಯಾಟಪ್ಪ, ನಾಗೇಶ್ವರಯ್ಯ, ವೆಂಕಟೇಶ್ ಅಯ್ಯಂಗಾರ್ ಇದ್ದರು.<br /> <br /> ರಥ ಬೀದಿಯಲ್ಲಿ ವಿವಿಧ ಸಮುದಾಯದವರು ಅರವಂಟಿಕೆಗಳನ್ನು ತೆರೆದು ನೀರು ಮಜ್ಜಿಗೆ, ಪಾನಕ, ರಸಾಯನ ವಿತರಿಸಿದರು. ಸೋಲೂರಿನ ಆರ್ಯ ಈಡಿಗರ ಮಠದ ಆರ್ಯ ರೇಣುಕಾನಂದ ಶ್ರೀಗಳು ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ ಸಹಿತ ರಥಬೀದಿಯಲ್ಲಿ ದೇವರ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ಇಲ್ಲಿನ ತಿರುಮಲ ರಂಗನಾಥಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನಡೆಯಿತು. ಮುಜರಾಯಿ ಅಧಿಕಾರಿ ನಿರಂಜನಬಾಬು ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ನಂತರ, ಭಕ್ತರು ಗೋವಿಂದಾ, ಗೋವಿಂದಾ ಎಂದು ನಾಮಸ್ಮರಣೆಯ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. <br /> <br /> ಪುಷ್ಪಾಲಂಕೃತವಾದ ರಥದ ಮೇಲೆ ಶ್ರೀದೇವಿ, ಭೂದೇವಿ ಸಹಿತ ರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ಇಡಲಾಗಿತ್ತು. <br /> <br /> ಕಾಕತಾಳೀಯ ಎಂಬಂತೆ ರಥೋತ್ಸವಕ್ಕೆ ಚಾಲನೆ ನೀಡಿದ ತಕ್ಷಣ ಆಕಾಶದಲ್ಲಿ ಗರುಡ ಪಕ್ಷಿ ರಥದ ಮೇಲೆ ಮೂರು ಸುತ್ತು ಹಾಕಿ ಕಣ್ಮರೆಯಾಯಿತು. ಬಾಳೆಹಣ್ಣಿಗೆ ದವನ ಸಿಕ್ಕಿಸಿ ಭಕ್ತರು ರಥಕ್ಕೆ ಎಸೆದರು.<br /> <br /> ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಮಾಜ ಸೇವಕ ಕೆ.ಬಾಗೇಗೌಡ, ಪುರಸಭಾಧ್ಯಕ್ಷ ಪುರುಷೋತ್ತಮ, ಜಿ.ಪಂ. ಸದಸ್ಯ ಮುದ್ದುರಾಜ್ಯಾದವ್, ಶ್ರೀರಂಗ ಸೇವಾಟ್ರಸ್ಟ್ನ ಅಧ್ಯಕ್ಷ ಟಿ.ಎಸ್. ಸತೀಶ್, ಶ್ರೀರಂಗಾಚಾರ್, ಕಲಾವಿದ ಎಚ್.ಆರ್.ಬ್ಯಾಟಪ್ಪ, ನಾಗೇಶ್ವರಯ್ಯ, ವೆಂಕಟೇಶ್ ಅಯ್ಯಂಗಾರ್ ಇದ್ದರು.<br /> <br /> ರಥ ಬೀದಿಯಲ್ಲಿ ವಿವಿಧ ಸಮುದಾಯದವರು ಅರವಂಟಿಕೆಗಳನ್ನು ತೆರೆದು ನೀರು ಮಜ್ಜಿಗೆ, ಪಾನಕ, ರಸಾಯನ ವಿತರಿಸಿದರು. ಸೋಲೂರಿನ ಆರ್ಯ ಈಡಿಗರ ಮಠದ ಆರ್ಯ ರೇಣುಕಾನಂದ ಶ್ರೀಗಳು ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ ಸಹಿತ ರಥಬೀದಿಯಲ್ಲಿ ದೇವರ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>