ಅಡಿಕೆ ಕೇಂದ್ರೀಕರಿಸಿ ಆರಂಭಿಸಿದ ಸಂಸ್ಥೆ ವಿಶಾಲವಾದ ದೃಷ್ಟಿಕೋನದಿಂದ ಬೆಳೆಯುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ಉತ್ತಮ ವಸೂಲಾತಿಯನ್ನು ಹೊಂದಿದ್ದೇವೆ. ಜೊತೆಗೆ ಪೆಟ್ರೋಲ್ ಬಂಕ್, ನಂದಿನಿ ಮಿಲ್ಕ ಪಾರ್ಲರ್, ಎಮಿಷನ್ ಟೆಸ್ಟ್, ಸಹ್ಯಾದ್ರಿ ಚೀಟಿ ನಿಧಿ, ಸಿಯಾ ಕುಡಿಯುವ ನೀರಿನ ಘಟಕ ಲಾಭದಾಯವಾಗಿ ನಡೆಯುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ನಷ್ಟ ಅನುಭವಿಸಿದ್ದ ಸಾರಿಗೆ ವಿಭಾಗ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.