<p><strong>ಶಿಕಾರಿಪುರ</strong>: ‘ವಸತಿ ಶಾಲೆಗಳ ಆಡಳಿತದಲ್ಲಿ ಗಣಕಯಂತ್ರ ಬಳಕೆ ಆಗುತ್ತಿದೆ. ಅದರೊಂದಿಗೆ ಎಐ ತಂತ್ರಜ್ಞಾನ ಅಳವಡಿಸಿದರೆ ಆಡಳಿತ ಸುಧಾರಣೆಗೆ ರಹದಾರಿಯಾಗುತ್ತದೆ. ಅದು ವಿದ್ಯಾರ್ಥಿಗಳ ಭವಿಷ್ಯಕ್ಕೂ ಉತ್ತಮ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ ಹೇಳಿದರು. </p>.<p>ತಾಲ್ಲೂಕಿನ ಚುರ್ಚಿಗುಂಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆ, ಎಐ ತಂತ್ರಜ್ಞಾನ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. </p>.<p>‘ಆಡಳಿತಕ್ಕಾಗಿ ಹಲವು ದಾಖಲೆಗಳನ್ನು ಸಿದ್ಧಪಡಿಸುವುದು ಹೆಚ್ಚು ಒತ್ತಡ, ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಸರಳೀಕರಿಸುವುದಕ್ಕೆ ಪ್ರತಿವರ್ಷ ಯಾವ ಬಗೆಯ ದಾಖಲೆ ಸಿದ್ಧಪಡಿಸಲಾಗುತ್ತದೆ? ಅದು ಇಲಾಖೆಯ ಯಾವೆಲ್ಲಾ ಕಚೇರಿಗೆ ಅಗತ್ಯ ಎನ್ನುವುದನ್ನು ಮನಗಂಡು ಅದಕ್ಕಾಗಿಯೇ ವಿಶೇಷ ಡ್ಯಾಶ್ಬೋರ್ಡ್ ಸಿದ್ಧಪಡಿಸಲಾಗುವುದು’ ಎಂದರು. </p>.<p>‘ವಸತಿ ಶಾಲೆ ನಿರ್ವಹಣೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಎಐ ತರಬೇತಿ ಪೂರಕವಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಹೇಳಿದರು. </p>.<p>ಆಡಳಿತಾತ್ಮಕವಾಗಿ ಎಐ ಬಳಕೆ ಹೇಗೆ ಮಾಡಬಹುದು ಎನ್ನುವ ಕುರಿತು ಡಿ.ಎ.ನಿಂಗಪ್ಪ ತರಬೇತಿ ನೀಡಿದರು.</p>.<p>ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಅಟಲ್ ಟಿಂಕರಿಂಗ್ ಕೇಂದ್ರದಲ್ಲಿ ತಯಾರಿಸಿದ ರೋಬೋ ಬಳಸಿ ಅತಿಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. </p>.<p>ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಸಮನ್ವಯಾಧಿಕಾರಿ ಚಂದ್ರಪ್ಪ, ಬಿ.ಉಮೇಶ್, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ರಾಜು ಮಾತನಾಡಿದರು. ಪ್ರಾಂಶುಪಾಲೆ ಬಿ.ಎಸ್.ಸುಮಾ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ</strong>: ‘ವಸತಿ ಶಾಲೆಗಳ ಆಡಳಿತದಲ್ಲಿ ಗಣಕಯಂತ್ರ ಬಳಕೆ ಆಗುತ್ತಿದೆ. ಅದರೊಂದಿಗೆ ಎಐ ತಂತ್ರಜ್ಞಾನ ಅಳವಡಿಸಿದರೆ ಆಡಳಿತ ಸುಧಾರಣೆಗೆ ರಹದಾರಿಯಾಗುತ್ತದೆ. ಅದು ವಿದ್ಯಾರ್ಥಿಗಳ ಭವಿಷ್ಯಕ್ಕೂ ಉತ್ತಮ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ ಹೇಳಿದರು. </p>.<p>ತಾಲ್ಲೂಕಿನ ಚುರ್ಚಿಗುಂಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆ, ಎಐ ತಂತ್ರಜ್ಞಾನ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. </p>.<p>‘ಆಡಳಿತಕ್ಕಾಗಿ ಹಲವು ದಾಖಲೆಗಳನ್ನು ಸಿದ್ಧಪಡಿಸುವುದು ಹೆಚ್ಚು ಒತ್ತಡ, ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಸರಳೀಕರಿಸುವುದಕ್ಕೆ ಪ್ರತಿವರ್ಷ ಯಾವ ಬಗೆಯ ದಾಖಲೆ ಸಿದ್ಧಪಡಿಸಲಾಗುತ್ತದೆ? ಅದು ಇಲಾಖೆಯ ಯಾವೆಲ್ಲಾ ಕಚೇರಿಗೆ ಅಗತ್ಯ ಎನ್ನುವುದನ್ನು ಮನಗಂಡು ಅದಕ್ಕಾಗಿಯೇ ವಿಶೇಷ ಡ್ಯಾಶ್ಬೋರ್ಡ್ ಸಿದ್ಧಪಡಿಸಲಾಗುವುದು’ ಎಂದರು. </p>.<p>‘ವಸತಿ ಶಾಲೆ ನಿರ್ವಹಣೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಎಐ ತರಬೇತಿ ಪೂರಕವಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಹೇಳಿದರು. </p>.<p>ಆಡಳಿತಾತ್ಮಕವಾಗಿ ಎಐ ಬಳಕೆ ಹೇಗೆ ಮಾಡಬಹುದು ಎನ್ನುವ ಕುರಿತು ಡಿ.ಎ.ನಿಂಗಪ್ಪ ತರಬೇತಿ ನೀಡಿದರು.</p>.<p>ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಅಟಲ್ ಟಿಂಕರಿಂಗ್ ಕೇಂದ್ರದಲ್ಲಿ ತಯಾರಿಸಿದ ರೋಬೋ ಬಳಸಿ ಅತಿಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. </p>.<p>ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಸಮನ್ವಯಾಧಿಕಾರಿ ಚಂದ್ರಪ್ಪ, ಬಿ.ಉಮೇಶ್, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ರಾಜು ಮಾತನಾಡಿದರು. ಪ್ರಾಂಶುಪಾಲೆ ಬಿ.ಎಸ್.ಸುಮಾ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>