ಆನವಟ್ಟಿ: ದೇವರು ಎಂದರೆ ಅಚಲವಾದ ನಂಬಿಕೆ, ಆ ನಂಬಿಕೆ ಪ್ರಾಮಾಣಿಕವಾಗಿದ್ದಾಗ ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಶಬರೀಶ ಗುರು ಸ್ವಾಮೀಜಿ ಹೇಳಿದರು.
ಈಚೆಗೆ ಜಡೆ ಗ್ರಾಮದಲ್ಲಿ 38ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಂಡ ಈರಪ್ಪ ಗುರುಸ್ವಾಮಿ ಅವರ ಇರುಮುಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾತ್ರೆಗಳಲ್ಲಿಯೇ ಕಠಿಣವಾದುದು ಶಬರಿಮಲೆ ಯಾತ್ರೆ. ಇಂತಹ ಯಾತ್ರೆಯನ್ನ ಸತತವಾಗಿ ಪಾಲಿಸಿಕೊಂಡು ಬಂದಿರುವ ಈರಪ್ಪ ಗುರು ಸ್ವಾಮೀಜಿ ಅವರ ಶ್ರಮ ಸಾಕಷ್ಟಿದೆ. ಯಾತ್ರೆಗೆ ಈಗ ದೇಶ ವಿದೇಶಗಳಿಂದ ಸಹ ಭಕ್ತಾದಿಗಳು ಆಗಮಿಸುತ್ತಿದ್ದಾರೆ ಎಂದರು.
ಸಂತೋಷ್ ಗುರು ಸ್ವಾಮೀಜಿ ಚಗಟೂರು, ದೇಸಾಯಿ ಗೌಡ ಸೇರಿದಂತೆ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಉಪಸ್ಥಿತರಿದ್ದರು.